Powered By Blogger
Showing posts with label camus. Show all posts
Showing posts with label camus. Show all posts

Sunday, April 11, 2021

CAMUS/ ಎಚ್ ಎಸ್ ರಾಘವೇಂದ್ರ ರಾವ್ - ಪ್ಲೇಗ್ / ಎಚ್. ದಂಡಪ್ಪ - ಪುಸ್ತಕ ವಿಮರ್ಶೆ: ಮರಣದ ಮಹಾನವಮಿಯಲ್ಲಿ ಮನುಷ್ಯತ್ವದ ಅಮೃತಧಾರೆ

ಪುಸ್ತಕ ವಿಮರ್ಶೆ: ಮರಣದ ಮಹಾನವಮಿಯಲ್ಲಿ ಮನುಷ್ಯತ್ವದ ಅಮೃತಧಾರೆ | Prajavani: ಕಮೂ, ಸಾರ್ತ್ರೆ, ಕಾಫ್ಕ ಇವರು ಕನ್ನಡದ ನವ್ಯದ ಸಂದರ್ಭದಲ್ಲಿ ಪದೇ ಪದೇ ಚರ್ಚಿತವಾಗುತ್ತಿದ್ದವರು. ಈಗಲೂ ಇವರ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇವರ ವಿಚಾರಧಾರೆಗಳು ಕನ್ನಡ ಲೇಖಕರ ಮೇಲೆ ಪ್ರಭಾವ ಬೀರಿವೆ. ಕಮೂನ ‘ಅಸಂಗತ’, ‘ಬಂಡಾಯ’, ‘ಸಿಸಿಪಸ್ ಕಲ್ಪಿತ ಕಥನ’ದ ವಿಚಾರಗಳು ಬಹಳಷ್ಟು ಕೃತಿಗಳಲ್ಲಿ ಕಾಣಿಸಿಕೊಂಡಿವೆ. ಅವನ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಪ್ರಕಟವಾಗಿರುವ ಅವನ ಐದು ಕಾದಂಬರಿಗಳಲ್ಲಿ ಎರಡು ಈಗಾಗಲೇ ಅನುವಾದವಾಗಿದ್ದವು.