Powered By Blogger

Tuesday, December 27, 2022

ಲಿಂಗ ವ್ಯವಸ್ಥೆಯ ಅಧ್ಯಯನ ದಲ್ಲಿ ಸಮಾನಾರ್ಥಕ ಪದಗಳು - ಇಂಗ್ಲಿಷ್ - ಕನ್ನಡ { 2022 } ಪ್ರಮುಲ ರಾಮನ್ / ಶಾಂತಿ ಜಿ

ಮೊದಲ ಓದು | ಸಂಶೋಧನಾ ಕ್ಷೇತ್ರಕ್ಕೆ ಕನ್ನಡ ಪದಕೋಶ | Prajavani

ದೇವು ಪತ್ತಾರ - - ಎನ್ ಜಗದೀಶ ಕೊಪ್ಪ ಅವರ " ಪದಗಳಿವೆ ಎದೆಯೊಳಗೆ " { 2022 } - {ದೇವದಾಸಿಯರ ಸಾಂಸ್ಕೃತಿಕ ಪಲ್ಲಟಗಳ ಕಥನ }

Book Review| ಅಸಾಮಾನ್ಯ ಮಹಿಳೆಯರ ಅನನ್ಯ ಕಥನ | Prajavani

ಚಿದಾನಂದ ಸಾಲಿ - ಲಕ್ಷ್ಮೀದೇವಿ ಶಾಸ್ತ್ರಿ ಅವರ " ಕರ್ನಾಟಕದ ಯುಗಪುರುಷ ಪಂ ತಾರಾನಾಥರು " ಅಭಿಮಾನದಿಂದ ಬಿಡಿಸಿದ ವ್ಯಕ್ತಿಚಿತ್ರ

Book Review| ಅಭಿಮಾನದಿಂದ ಬಿಡಿಸಿದ ವ್ಯಕ್ತಿಚಿತ್ರ | Prajavani

Defending the Freedom of Expression | Meena Kandasamy @Manthan Samvaad 2022

ಡಿ ಎ ಶಂಕರ್ ಅವರ " ವಾಗರ್ಥ } { ಸಾಹಿತ್ಯ ವಿಮರ್ಶೆ -2022 }

Book Review| ವಾಗರ್ಥದಲ್ಲಿ ಅಡಗಿರುವ ಸತ್ಯಗಳು | Prajavani

ವಿವೇಕ ಶ್ಯಾನುಭಾಗ್ - | ಕಾಣಿ ಸುಟ್ಲಿ; ಚಿತ್ತಾಲರ ಕೊನೆಯ ಕಾದಂಬರಿ ‘ದಿಗಂಬರ’ದ ಸುತ್ತ | YASHAVANTH CHITTAL

ಪುಸ್ತಕ ವಿಮರ್ಶೆ | ಕಾಣಿ ಸುಟ್ಲಿ; ಚಿತ್ತಾಲರ ಕೊನೆಯ ಕಾದಂಬರಿ ‘ದಿಗಂಬರ’ದ ಸುತ್ತ | Prajavani

ಕುವೆಂಪು ಸಾಹಿತ್ಯದಲ್ಲಿ ಆಧುನಿಕ ಪ್ರಜ್ಞೆ ಹೇರಳ -ಡಾ. ರಹಮತ್‌

ಕುವೆಂಪು ಸಾಹಿತ್ಯದಲ್ಲಿ ಆಧುನಿಕ ಪ್ರಜ್ಞೆ ಹೇರಳ -ಡಾ. ರಹಮತ್‌ | Prajavani

ಕುವೆಂಪು ನಿರಂತರ | ವಿಚಾರಗೋಷ್ಠಿ | ಕೆ. ಸಿ. ಶಿವಾರೆಡ್ಡಿ | ಕುವೆಂಪು ದರ್ಶನ ಮತ್ತು ...

Author Padachinha's speech about his book " ನಾವು ಏಕೆ ಬದುಕಬೇಕು "

Author Bharathi B V's speech -" ಈ ಪ್ರೀತಿ ಒಂಥರಾ " { 2022 }

Author Meghana Sudhindra's speech about her book " ಪಾಥೇರಸ್ { ನೀಳ್ಗತೆ 2022 }

Author Poornima Malagimani's speech about her book " ಡೂಡ್ಲ್ ಕತೆಗಳು " {2022 }

Author N. Sandhya Rani's speech about her book " ಇಷ್ಟು ಕಾಲ ಒಟ್ಟಿಗಿದ್ದು ’ -{ ಕಾದಂಬರಿ 2022 }

Monday, December 26, 2022

ಮೈಂ ಅವ್ರ ಮೇರೆ ಲಮ್ಹೆ – ಎಚ್ ಎಸ್ ಮುಕ್ತಾಯಕ್ಕ/ H S Muktayakka ,

ಮೈಂ ಅವ್ರ ಮೇರೆ ಲಮ್ಹೆ – ಋತುಮಾನ ಅಂಗಡಿ

ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ– ಪ್ರಹಸನ’ ಬಿಡುಗಡೆ | Chandrshekhara Kambara

ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ– ಪ್ರಹಸನ’ ಬಿಡುಗಡೆ | Prajavani

ಅನಂದಿನಿ | ಹಾವಳಿ: ವಿಮೋಚನಾ ಹೋರಾಟದ ಕಥನ |Mallikarjuna Hirematha ,

ಅವಲೋಕನ | ಹಾವಳಿ: ವಿಮೋಚನಾ ಹೋರಾಟದ ಕಥನ | Prajavani

ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’ -ಟಿ ಪಿ ಅಶೋಕ , Mallikarjuna Hirematha ,

ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’ | ಅವಧಿ । AVADHI

ಮಹಾಬಿಂದು { 2022 } ಎಚ್ ಟಿ ಪೋತೆ ಅವರ ಕಾದಂಬರಿ

ಮಹಾಬಿಂದು | Bookbrahma

ವಿನಯ್ ಮಾಧವ್ ಮಾಕೋನಹಳ್ಳಿ - - ರಾಜೇಶ್ ಶೆಟ್ಟಿ ಅವರ ಕಾದಂಬರಿ " ಹಾವು ಹಚ್ಚೆಯ ನೀಲಿ ಹುಡುಗಿ " { 2022 }RAJESH SHETTY

ಆ ಹುಡುಗಿ ನೀಲಿಯಾಗಿದ್ದು ಏಕೆ? ನನಗಾಗ ಹತ್ತು ವರ್ಷ ವಯಸ್ಸು ಅಂತ ಕಾಣುತ್ತೆ. ನನ್ನ ಜೀವನದ ಮೊದಲ ಐದು ವರ್ಷ ಕಳೆದ, ಕೊಡಗಿನ ಪಾಲಿಬೆಟ್ಟಕ್ಕೆ ಹೋಗಿದ್ದೆ. ಪಾಲಿಬೆಟ್ಟದಲ್ಲಿ ಸಂಬಂಧಿಕರ್ಯಾರೂ ಇಲ್ಲದಿದ್ದರೂ, ಪಾಲಿಬೆಟ್ಟದಿಂದ ಮೂರು ಕಿಲೋಮೀಟರ್‌ ದೂರದಲ್ಲಿರುವ ಮೇಕೂರಿನ ಪುಲಿಯಂಡ ಪೊನ್ನಪ್ಪ ಮತ್ತು ಲಲಿತಾಂಟಿಯ ಮನೆ ನಮಗೆ ನಮ್ಮ ಮನೆಯಂತೆಯೇ ಇತ್ತು ಮತ್ತು ಈಗಲೂ ಇದೆ. ಏಕೆಂದರೆ, ಅವರ ಮಗಳು ದಿವ್ಯ ನನ್ನನ್ನು ಎತ್ತಿ ಆಡಿಸಿದವಳು ಮಾತ್ರವಲ್ಲ, ನನ್ನ ದೊಡ್ಡಪ್ಪನ ಮಗಳು ವಾತ್ಸಲ್ಯಕ್ಕನ ಸಹಪಾಠಿಯೂ ಆಗಿದ್ದಳು. ದಿವ್ಯಳ ತಮ್ಮ ಬೋಪಣ್ಣ ಮತ್ತೆ ನಾನು ಒಂದೇ ವಯಸ್ಸಿನವರಾದ್ದರಿಂದ, ಇಂದಿಗೂ ನಾವು ಸಂಪರ್ಕದಲ್ಲಿ ಇದ್ದೇವೆ. ಹಾಗಾಗಿ ಮೇಕೂರಿನ ಪುಲಿಯಂಡ ಮನೆ ನಮಗೆ ಹೊರಗಿನದೇನಲ್ಲ. ಏನೋ ಮಾತನಾಡುತ್ತ ಲಲಿತಾಂಟಿ, ʻರೀ ವಿಜಯಮ್ಮ…. ನೆನಪಿದೆಯಾ ನೀವು ಟ್ರಾನ್ಸ್ಫರ್‌ ಆದಾಗ ಸುಧಾಕರ್‌ ಡಾಕ್ಟರ್ ಅಂತ ಇಲ್ಲಿಗೆ ಬಂದಿದ್ದರಲ್ಲ…. ಅವರು ಈಗಲೂ ವಿನಯ್‌ ನ ಕೇಳ್ತಾ ಇರ್ತಾರೆ. ಆ ಹುಡುಗ ಈಗ ಏನು ಮಾಡ್ತಾ ಇದ್ದಾನೆ? ಅಂತ,ʼ ಎಂದು ಹೇಳಿ ಇಬ್ಬರೂ ನಗತೊಡಗಿದರು. ಈ ಸುಧಾಕರ್‌ ಡಾಕ್ಟರ್‌ ಯಾರು? ಎನ್ನುವುದು ನನಗೆ ಗೊತ್ತಿರಲಿಲ್ಲ. ಅವರಿಗೆ ನಾನು ಹೇಗೆ ಗೊತ್ತು ಎನ್ನುವುದು ಅರ್ಥವಾಗದೆ, ʻಯಾರಮ್ಮ ಅದು?ʼ ಅಂತ ಕೇಳಿದೆ. ʻನೀನು ಚಿಕ್ಕವನಿದ್ದಾಗ ಅವರಿಗೆ ಏನೋ ಹೇಳಿದ್ದೆ, ಹಾಗಾಗಿ ಅವರು ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಪಾಲಿಬೆಟ್ಟ ದೊಡ್ಡದಾಯ್ತೋ ಇಲ್ಲವೋ ಗೊತ್ತಿಲ್ಲ, ನನಗಂತೂ ಇಲ್ಲಿಗೆ ಬಂದು ಒಳ್ಳೆಯದಾಯ್ತು, ಅಂತ ಹೇಳ್ತಾ ಇರ್ತಾರೆ,ʼ ಅಂತ ಲಲಿತಾಂಟಿ ಹೇಳಿದರು. ಆಗಿದ್ದಿಷ್ಟೆ. ಅಣ್ಣ (ಅಪ್ಪ) ಪಾಲಿಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ, ಸಕಲೇಶಪುರಕ್ಕೆ ವರ್ಗವಾಗಿತ್ತು. ನಾವು ಹೊರಡುವ ಸಮಯದಲ್ಲಿ, ಆಗಷ್ಟೆ ಡಾಕ್ಟರ್‌ ಆಗಿದ್ದ ಸುಧಾಕರ್‌ ಎನ್ನುವವರು ಪಾಲಿಬೆಟ್ಟದಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿ ಮಾಡಲು ಬಂದಿದ್ದರಂತೆ. ವಿಪರೀತ ಮಾತನಾಡುತ್ತಿದ್ದ ನನ್ನನ್ನು ಕರೆದು, ʻಅಲ್ಲ ಮರಿ… ನೀನೇನೋ ಪಟ್ಟಣಕ್ಕೆ ಹೋಗುತ್ತೀಯ. ನಾನು ಈ ಸಣ್ಣ ಹಳ್ಳಿಯಲ್ಲಿ ಇರಬೇಕಲ್ಲ,ʼ ಎಂದರಂತೆ. ತಕ್ಷಣವೇ ನಾನು, ʻಅಂಕಲ್‌, ತಲೆ ಕೆಡಿಸಿಕೊಳ್ಳಬೇಡಿ. ಆಂಡವ ಕವಿ ಹೇಳುತ್ತಾನೆ, ಹಳ್ಳಿಗಳೇ ಬೆಳೆದು ದೊಡ್ಡ ನಗರವಾಗುತ್ತದೆ ಅಂತ. ಪಾಲಿಬೆಟ್ಟ ಕೂಡ ಬೆಳೆಯುತ್ತಿದೆ,ʼ ಎಂದು ಹೇಳಿದನಂತೆ. ಎಲ್ಲರೂ ಗೊಳ್ಳನೆ ನಕ್ಕರೆ, ಸುಧಾಕರ್‌ ಡಾಕ್ಟರ್‌ ನನ್ನ ಕೆನ್ನೆ ಹಿಂಡಿ, ʻನೀನು ಹೇಳಿದೆ ಅಂತ ಇಲ್ಲಿ ಇರುತ್ತೇನೆ. ಈ ಹಳ್ಳಿ ಬೆಳೆಯದೇ ಹೋದರೆ, ನಿನ್ನನ್ನು ಹುಡುಕಿಕೊಂಡು ಬಂದು ಮತ್ತೆ ಕೇಳ್ತೀನಿ,ʼ ಎಂದಿದ್ದರಂತೆ. ʻಸುಧಾಕರ್‌ ಡಾಕ್ಟರಿಗೆ ಒಳ್ಳೆ ಪ್ರಾಕ್ಟೀಸ್‌ ಇದೆ. ಕಾರು ತಗೊಂಡಿದ್ದಾರೆ ಮತ್ತೆ ಊರಿನಲ್ಲಿ ಸ್ವಲ್ಪ ಜಾಗ ಕೂಡ ತಗೊಂಡಿದ್ದಾರಂತೆ. ಈಗಲೂ ಅಷ್ಟೆ, ವಿನಯ್‌ ನನ್ನು ನೆನಸಿಕೊಂಡು, ಆ ಹುಡುಗ ಏನು ಮಾಡ್ತಾ ಇದ್ದಾನೆ? ಎಷ್ಟು ಚೂಟಿ ಅಲ್ವಾ? ಹಾಗೇ ಇದ್ದಾನಾ?ʼ ಅಂತ ಕೇಳ್ತಾ ಇರ್ತಾರೆ,ʼ ಅಂತ ಲಲಿತಾಂಟಿ ಹೇಳಿದರು. ʻಈ ಆಂಡವ ಕವಿ ಯಾರಮ್ಮಾ?ʼ ಅಂತ ನಾನು ಕೇಳಿದೆ. ʻಯಾರಿಗೆ ಗೊತ್ತು? ನೀನೆ ಹೇಳಿದ್ದು. ನಿನಗೇ ಗೊತ್ತಿಲ್ಲದ ಮೇಲೆ, ಇನ್ಯಾರಿಗೆ ಗೊತ್ತಿರುತ್ತೆ. ಬಾಯಿಗೆ ಬಂದ ಹಾಗೆ ಮಾತಾಡ್ತಾ ಇದ್ದೆ ನೀನು,ʼ ಅಂತ ಅಮ್ಮ ನಕ್ಕರು. ಈ ಘಟನೆ ನನ್ನ ಮನಸ್ಸಿನಲ್ಲಿ ಬಹಳಷ್ಟು ಕಾಲ ಕಾಡಿತ್ತು. ಸುಧಾಕರ್‌ ಡಾಕ್ಟರನ್ನು ನನ್ನ ಜೀವನದಲ್ಲಿ ಎಂದೂ ನೋಡಲಿಲ್ಲ ಮತ್ತು ಅವರು ಹೇಗಿದ್ದರು ಎನ್ನುವುದೂ ನೆನಪಿನಲ್ಲಿರಲಿಲ್ಲ. ಆದರೆ ಈ ಆಂಡವ ಕವಿ ಯಾರು? ಅವನು ಹೇಳಿದ ಎಂದು, ನಾನು ಐದನೇ ವರ್ಷದ ವಯಸ್ಸಿನಲ್ಲಿ ಆ ಮಾತನ್ನು ಹೇಗೆ ಹೇಳಿದ್ದೆ? ಎನ್ನುವುದು ಜಿಜ್ಞಾಸೆಯಾಗಿಯೇ ಉಳಿದಿತ್ತು. ಮುಂದೆ ಬೆಳೆಯುತ್ತಾ ಹೋದಾಗ, ಆಂಡವ ಕವಿ ಹಿನ್ನೆಲೆಗೆ ಹೋಗಿ, ಅವನು ಹೇಳಿದ ಮಾತಾದ ʻಹಳ್ಳಿಗಳೇ ಬೆಳೆದು ದೊಡ್ಡ ನಗರಗಳಾಗುತ್ತವೆ,ʼ ಎನ್ನುವ ಮಾತು ಕಾಡಲು ಆರಂಭಿಸಿತು. ಸಾಧಾರಣವಾಗಿ ನಮ್ಮನ್ನು ಮೇಕೂರಿಗೆ ಕರೆದುಕೊಂಡು ಹೋಗಲು ಲಲಿತಾಂಟಿ ಕಾರು ಕಳುಹಿಸುತ್ತಿದ್ದರು. ಎಷ್ಟೋ ದಿನ ಅಲ್ಲಿಯೇ ಉಳಿಯುತ್ತಿದ್ದೆವು ಕೂಡ. ಕೆಲವೊಂದು ಸಲ ನಡೆದುಕೊಂಡು ಹೋದದ್ದೂ ನೆನಪಿದೆ. ಆಗೆಲ್ಲ ತೋಟದ ಪಕ್ಕದಲ್ಲಿ ಆನೆಗಳು ಬಂದಿವೆ ಎನ್ನುವುದನ್ನು ಜನ ಸಹಜವಾಗಿ ಮಾತನಾಡುತ್ತಿದ್ದರು ಮತ್ತು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೆಚ್ಚೆಂದರೆ, ನಮ್ಮ ಓಡಾಟವನ್ನು ಅವುಗಳಿಗೆ ತಿಳಿಸಲು ಸ್ವಲ್ಪ ಜೋರಾಗಿ ಮಾತನಾಡುತ್ತಿದ್ದರು. ಅವೂ ಸಹ ಮನುಷ್ಯರು ಬಂದರೆ ಅಲ್ಲಿಂದ ಹೊರಟು ಹೋಗುತ್ತಿದ್ದವು. ಪಾಲಿಬೆಟ್ಟದಲ್ಲಿ ಆಸ್ಪತ್ರೆಯೇ ಕೊನೆಯ ಕಟ್ಟಡ. ಅಲ್ಲಿಂದ ಮೇಕೂರಿಗೆ ಬರುವಾಗ ದಾರಿಯಲ್ಲಿ ಯಾವುದೇ ಮನೆಗಳಿರಲಿಲ್ಲ. ಬಹಳಷ್ಟು ಕಾಡುಗಳಿದ್ದವು. ಈಗ ಆಸ್ಪತ್ರೆ ದಾಟಿದ ಮೇಲೆ ಸಹ ಬಹಳಷ್ಟು ಮನೆಗಳಾಗಿವೆ. ಬಹಳಷ್ಟು ಕಾಡು ಇದ್ದ ಜಾಗಗಳು ಕಾಫಿ ತೋಟಗಳಾಗಿವೆ. ಆನೆಗಳು ಈಗಲೂ ಬರುತ್ತವೆ. ಆದರೆ, ಮೊದಲಿನಷ್ಟು ಸಹಜವಾಗಿ ಯಾರೂ ಮಾತನಾಡುತ್ತಿಲ್ಲ. ಆಗ ಆನೆ ತುಳಿದು ಸಾಯುವುದು ಎನ್ನುವುದನ್ನು ಕೇಳಿದ್ದೇ ಕಡಿಮೆ. ಆದರೆ, ಈಗ ಆನೆಗಳ ಹಾವಳಿಯ ಬಗ್ಗೆ ಎಲ್ಲೆಲ್ಲೂ ಕಥೆಗಳು ಕೇಳುತ್ತಿರುತ್ತೇವೆ. ಇದು ಪಾಲಿಬೆಟ್ಟ ಅಥವಾ ಮೇಕೂರಿನ ಕಥೆಯಲ್ಲ. ಇಡೀ ಮಲೆನಾಡಿನ ಕಥೆ. ಆದರೆ, ಆಗ ಆನೆ, ಹುಲಿ, ಚಿರತೆಗಳ ಕಾಟವಿರಲಿಲ್ಲವೇ? ಅವು ಇದ್ದವು, ಆದರೆ ಕಾಟ ಇರಲಿಲ್ಲ. ಈಗೇಕೆ ಹೀಗೆ? ಅದಕ್ಕೆ ದಶಕಗಳ ಇತಿಹಾಸವಿದೆ. ನಾವು ಚಿಕ್ಕಂದಿನಲ್ಲಿ ಇದ್ದಾಗ, ಊರುಗಳಿಗೆ ಒಂದು ಗಡಿ ಇರುತ್ತಿತ್ತು. ಇರಡು ಊರಿನ ಗಡಿಗಳ ಮಧ್ಯೆ ಕಾಡು, ಹರ ಮುಂತಾದವು ಇರುತ್ತಿದ್ದವು. ಈ ಕಾಡುಗಳಲ್ಲಿ ಹಣ್ಣಿನ ಮರಗಳು ಮತ್ತು ಬಿದಿರು ಯಥೇಚ್ಚವಾಗಿ ಇರುತ್ತಿದ್ದವು ಮತ್ತು ಜಿಂಕೆ, ಕಾಡುಹಂದಿಯಂತಹ ಪ್ರಾಣಿಗಳು ಸಹ. ಈಗ ಈ ಜಾಗಗಳೆಲ್ಲ ಕಾಫಿ ತೋಟಗಳಾಗಿ ಪರಿವರ್ತನೆಗೊಂಡಿವೆ. ತೋಟದಲ್ಲಿ ಕೆಲಸ ಮಾಡಲು ಕಷ್ಟ ಎಂದು ಬಿದಿರು ಮತ್ತು ಹಣ್ಣಿನ ಗಿಡಗಳನ್ನು ನೆಲಸಮ ಮಾಡಲಾಗಿದೆ. ಆಹಾರ ಹುಡುಕಿಕೊಂಡು ಬರುವ ಪ್ರಾಣಿಗಳು ಈಗ ʻಕಾಟʼವಾಗಿ ಪರಿವರ್ತನೆಗೊಂಡಿವೆ, ಅಷ್ಟೆ. ಹಳ್ಳಿಗಳು ನಗರವಾಗುವುದು ಎಂದರೆ ಹೀಗೆ ಎನ್ನುವುದು ಐದು ವರ್ಷದ ನನಗೆ ಅರ್ಥವಾಗಿರಲಿಲ್ಲ ಅಂತ ಕಾಣುತ್ತೆ. ಈ ಕಾಡುಗಳು ಹೇಗೆ ಸಾವಿರಾರು ವರ್ಷಗಳು ಉಳಿದಿದ್ದವು ಎಂದು ಯೋಚಿಸಿದಾಗ, ಅದನ್ನು ಮನುಷ್ಯರೇ ಉಳಿಸಿಕೊಂಡಿದ್ದರು ಎನ್ನುವುದು ಅರ್ಥವಾಗುತ್ತದೆ. ಪ್ರತೀ ಊರಿನ ಗಡಿಗಳಲ್ಲಿ ದೇವರ ಕಾಡು ಎನ್ನುವುದು ಸಹಜವಾಗಿ ಇರುತ್ತಿದ್ದವು. ಹಾಗೆಯೇ, ನಾಗ ಬನಗಳಿರುತ್ತಿದ್ದವು. ಯಾವುದೇ ಕಾರಣದಿಂದ ಮನುಷ್ಯರು ಈ ಕಾಡುಗಳಿಂದ ಮರ ಕಡಿಯುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ, ಪೂಜೆಗೆಂದು ಕಾಡಿಗೆ ಹೋಗಿ, ಮತ್ತೆ ವಾಪಾಸು ಬರುತ್ತಿದ್ದರು. ಈ ದೇವಸ್ಥಾನಗಳ ಮತ್ತು ನಾಗರ ಕಲ್ಲಿನ ಸುತ್ತ ಮುತ್ತ ನೂರಾರು ಎಕರೆ ಸಹಜ ಕಾಡು ಇರುತ್ತಿತ್ತು. ಊರಿನ ಗಡಿಗೆ ಬಂದ ಪ್ರಾಣಿಗಳು ಆ ಕಾಡುಗಳ ಮೂಲಕ ದಾಟಿ ಹೋಗುತ್ತಿದ್ದವು. ಈಗ ಆ ಕಾಡುಗಳೆಲ್ಲ ತೋಟಗಳಾಗಿ, ಬರೀ ದೇವಸ್ಥಾನ, ನಾಗರ ಕಲ್ಲುಗಳು ಉಳಿದಿವೆ. ದೇವರು ಕಾಡಿನ ಹೆಚ್ಚಿನ ದೇವಸ್ಥಾನಗಳಲ್ಲಿ ಇರುವುದು ಹೆಣ್ಣು ದೇವರುಗಳೇ. ಭಾರತದಲ್ಲಿ ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತಾರೆ. ಮೊದಲನೆಯದಾಗಿ, ಹೆಣ್ಣು ಜನ್ಮದಾತೆ, ಅನ್ನದಾತೆ ಮತ್ತು ಶಕ್ತಿ. ಎರಡನೆಯದಾಗಿ, ಪ್ರಕೃತಿಯ ಸೌಂದರ್ಯವನ್ನು ಹೋಲಿಸಲು ಮನುಷ್ಯನಿಗೆ ಬೇರೆ ಹೋಲಿಕೆ ಸಿಗಲಾರದು. ಬೆಟ್ಟಗಳಲ್ಲಿ ಬಂಡೆಯಿಂದ ಬಂಡೆಗೆ ಹಾರುತ್ತಾ, ವಯ್ಯಾರದಿಂದ ಬಳುಕುತ್ತಾ ಹರಿಯುವ ನದಿಯೇ ಇರಬಹುದು, ಮೈತುಂಬಿ ನಿಂತ ಮರ, ಲತೆ, ಹೂಗಳಿರಬಹುದು. ಆ ಸೌಂದರ್ಯವನ್ನು ಹೊಗಳಲು ಹೆಣ್ಣಿಗಿಂತ ಉತ್ತಮ ಉಪಮೇಯ ದೊರಕುವುದು ಕಷ್ಟ. ಪ್ರಕೃತಿ ಎನ್ನುವುದು ಶಕ್ತಿ-ಸೌಂದರ್ಯಗಳ ಸಮ್ಮಿಳನ. ಇನ್ನುಳಿದಂತೆ ಜನಪ್ರಿಯವಾದದ್ದು ನಾಗ ಬನಗಳು. ಈ ನಾಗ ಬನಗಳ ಬಗ್ಗೆ ಯೋಚಿಸುವಾಗ ಆಶ್ಚರ್ಯವಾಗುತ್ತದೆ. ವಿಷಪೂರಿತ ಎಂದು ಭಯಪಡುವ ಈ ಸರೀಸೃಪಗಳನ್ನು ಮನುಷ್ಯ ಏಕಾಗಿ ಮತ್ತು ಹೇಗೆ ದೇವರು ಮಾಡಿದ ಎಂದು. ಈ ಹಾವುಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಎಷ್ಟೊಂದು ಕಥೆಗಳಿವೆ ಮತ್ತು ನಮ್ಮ ಜನಪದಗಳಲ್ಲೂ ಅಷ್ಟೇ ದಂತ ಕಥೆಗಳಿವೆ. ಹಾವಿನ ದ್ವೇಶ, ಶಾಪ ಮುಂತಾದ ಕಥೆಗಳನ್ನು ಚಿಕ್ಕಂದಿನಲ್ಲಿ ಓದುವಾಗ ಮೈ ಜುಂ ಎನ್ನುತ್ತಿತ್ತು. ಹಾವು ಕಚ್ಚಿಸಿಕೊಂಡವರ ಮೈ ನೀಲಿ ಬಣ್ಣಕ್ಕೆ ತಿರುಗಿ ಸಾಯುತ್ತಾರೆ ಎಂದು ಹೇಳುತ್ತಿದ್ದರು. ದೊಡ್ಡವರಾಗುತ್ತಾ ಬಂದಾಗ, ಹಾವಿನ ಬಗ್ಗೆ ತಿಳಿದುಕೊಳ್ಳುತ್ತಾ ಹೋದಾಗ, ಇವೆಲ್ಲ ಸಾಧ್ಯವೇ ಇಲ್ಲದ ಕಥೆಗಳು ಎನ್ನುವುದು ಮನದಟ್ಟಾಯಿತು. ಸರಿಯಾಗಿ ಕಣ್ಣೂ ಕಾಣದ, ಕಿವಿಯೂ ಇಲ್ಲದ, ತೆವಳುತ್ತಾ ಬದುಕುವ ಇದೊಂದ ಅಸಹಾಯಕ ಪ್ರಾಣಿ. ಆದರೆ, ಮನುಷ್ಯನ ಆಹಾರ ಪದಾರ್ಥಗಳನ್ನು ನಾಶ ಮಾಡುವ ಇಲಿಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದರಲ್ಲಿ ಹಾವು ಮುಂಚೂಣಿಯಲ್ಲಿರುತ್ತದೆ. ಇಲ್ಲದೇ ಹೋದರೆ, ಪ್ರಕೃತಿಯ ಆಹಾರ ಸರಪಳಿಯು ವ್ಯತ್ಯಾಸವಾಗುವ ಅಪಾಯವಿದೆ. ಬಹಳಷ್ಟು ಯೋಚಿಸಿದ ಮೇಲೆ ಅನ್ನಿಸಿತು, ಮನುಷ್ಯರು ಹಾವಿನ ವಿಷಕ್ಕೆ ಹೆದರುವಷ್ಟು ಬೇರಾವುದಕ್ಕೂ ಹೆದರುವುದಿಲ್ಲ. ಹಾಗಾಗಿ, ಪ್ರಾಣಿಗಳ ಸಂಘರ್ಷಕ್ಕೆ ಕಡಿವಾಣ ಹಾಕುತ್ತಿದ್ದ ಈ ಕಾಡುಗಳ ರಕ್ಷಣೆಗೆ ಹಾವುಗಳ ಕವಚ ತೊಡಿಸಿದ್ದರು ಎಂದು ಅನಿಸಲಾರಂಭಿಸಿದರು. ಈಗ ಏಳೆಂಟು ದಶಕಗಳಿಂದೀಚೆ ಈ ಕವಚಗಳೆಲ್ಲ ಒಡೆದು ಚೂರಾಗಿ ಹೋಗಿವೆ. ಪ್ರತೀ ಕಾಡುಗಳಲ್ಲಿ ಈ ದೇವರುಗಳ ಪೂಜೆಗೆ ಕಲ್ಲಿನಷ್ಟು ಜಾಗ ಬಿಟ್ಟು, ಉಳಿದದ್ದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಗಣಿಗಾರಿಕೆಗಾಗಿ ದೊಡ್ಡ ದೇವಸ್ಥಾನಗಳನ್ನೂ ಡೈನಮೈಟ್‌ ಹಾಕಿ ಉಡಾಯಿಸಲಾಗಿದೆ. ಕಾಡು ಸಾಂಕೇತಿಕವಾಗಿದೆ ಮತ್ತು ಪ್ರಾಣಿಗಳ ಓಡಾಟ ಕಾಟವಾಗಿದೆ. ಇದರ ಮಧ್ಯೆ ರಾಜೇಶ್‌ ಶೆಟ್ಟಿ ತನ್ನ ಹೊಸ ಕಾದಂಬರಿಯೊಂದನ್ನು ನನ್ನ ಕೈಗಿಟ್ಟ. ನಾನು ಓದುವ ಸಮಯದಲ್ಲಿ ಅದಕ್ಕೆ ಹೆಸರಿಟ್ಟಿರಲಿಲ್ಲ. ʻಏನು ಬರೆದಿದ್ದೀಯಾ?ʼ ಎಂದು ಕೇಳಿದಾಗ, ʻಅಡಲ್ಟ್‌ ಲವ್‌ ಸ್ಟೋರಿʼ ಎಂದು ಹೇಳಿದ. ನಾನು ನಕ್ಕಿದ್ದೆ. ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದ ಸಹಸ್ರಾರು ಯುವಕರ ಕಥೆಯಂತೆ ಸಾಗಿದ ಕಥೆಯಲ್ಲಿ ಒಂದು ಹುಡುಕಾಟ ಬರುತ್ತದೆ. ಬಾಲ್ಯ ಸ್ನೇಹಿತ ಕೃಷ್ಣನನ್ನು ಹುಡುಕುತ್ತಾ ಹೊರಟ ಅಮರ್‌, ಕೃಷ್ಣನ ಸ್ನೇಹಿತೆಯನ್ನು ನೋಡುತ್ತಾನೆ. ಇಲ್ಲಿಂದಾಚೆಗೆ ಇದೊಂದು ಅರ್ಬನ್‌ ಜನಪದವಾಗಿ, ಮ್ಯಾಜಿಕಲ್‌ ರಿಯಲಿಸಮ್‌ ಗೆ ತಿರುಗುತ್ತದೆ. ಅಲ್ಲೊಂದು ಸುಂದರ ಯುವತಿ ಇದ್ದಾಳೆ. ಅವಳ ಹಿಂದೆ ಶತ ಶತಮಾನಗಳ ಜಾನಪದ ಚರಿತ್ರೆ ಇದೆ. ಆಕೆಯನ್ನು ಹಾವುಗಳು ಕಾಯುತ್ತಿವೆ ಮತ್ತು ಆಕೆಯ ತೋಳಿನಲ್ಲೂ ಹಾವಿನ ಹಚ್ಚೆ ಇದೆ. ಆದರೂ ಆಕೆಯ ಮೈ ನೀಲಿಗಟ್ಟಿದ್ದು ಏಕೆ ಮತ್ತು ಆಕೆಯ ಮೈ ನೀಲಿಗಟ್ಟಿಸಿದ ವಿಷ ಯಾವುದು? ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಒಂದು ನಿಟ್ಟುಸಿರು ಬಿಟ್ಟೆ. ರಾಜೇಶ್‌ ಹೇಳಿದ ʻಅಡಲ್ಟ್‌ ಲವ್‌ ಸ್ಟೋರಿʼಮತ್ತು ಅದರ ಸುತ್ತ ಬರುವ ಪಾತ್ರಗಳು ಬರೀ ನಿಮಿತ್ತ ಎನಿಸಿತು. ಆ ನೀಲಿ ಹುಡುಗಿ ಸಿಗುವ ಜಾಗಗಳೆಲ್ಲ ಒಮ್ಮೆ ಕಣ್ಣ ಮುಂದೆ ಹಾಯ್ದು ಹೋಯಿತು…. ಮಾಕೋನಹಳ್ಳಿ ವಿನಯ್‌ ಮಾಧವ

ಅನಸೂಯಾ ರಾಮಯ್ಯ ಮಾಲಗೊಂಡಹಳ್ಳಿ- - ಎನ್ ಸಂಧ್ಯಾರಾಣಿ ಅವರ ಕಾದಂಬರಿ -" ಇಷ್ಟು ಕಾಲ ಒಟ್ಟಿಗಿದ್ದು "{ 2022 }

ಕೃತಿ : ಇಷ್ಟು ಕಾಲ ಒಟ್ಟಿಗಿದ್ದು . . . ಲೇಖಕರು : ಎನ್. ಸಂಧ್ಯಾ ರಾಣಿ ಪ್ರಕಾಶಕರು : ಸಾವಣ್ಣ ಎಂಟರ್ ಪ್ರೈಸಸ್, ಬೆಂಗಳೂರು ಕೃತಿಯ ಅರ್ಪಣೆಯ ಮಾತುಗಳಲ್ಲಿನ ಕೊನೆಯ ಸಾಲು " ನಾನು ಕಂಡ , ಮೆಚ್ಚಿದ ,ಮರುಗಿದ ,ಬೆರಗಾದ ಎಲ್ಲಾ ಹೆಣ್ಣು ಜೀವಗಳಿಗೆ " ತುಂಬಾ ಆಪ್ತವಾಗುವ ಈ ಮಾತುಗಳು ಮನ ಮುಟ್ಟುತ್ತವೆ. ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಪ್ರಖ್ಯಾತ ಸಂಗೀತಕಾರ ನೀಲ ಲೋಹಿತರ ಪತ್ನಿ ಕಾತ್ಯಾಯಿನಿ ಅವರ ಸಂದರ್ಶನದ ವೇಳೆ ಲೇಖಕಿಯು ಒಂದು ಪ್ರಶ್ನೆ ಕೇಳಿದಾಗ ಅವರ ಮುಖಭಾವದ ಬದಲಾವಣೆಯೊಂದಿಗೆ ಕಣ್ಣೀರಧಾರೆಯ ಬಗ್ಗೆ ಹೇಳುವಾಗ ಓದುಗರಿಗೂ ಪ್ರತ್ಯಕ್ಷ ಅನುಭವದಂತೆ ಆರ್ದ್ರತೆಯ ಅನುಭವ ಆಗುತ್ತದೆ. ಈ ಪ್ರಸಂಗವು ಕೃತಿಯ ಸಂವೇದನಾ ಶೀಲತೆಗೆ ಸಾಕ್ಷಿಯಾಗಿದೆ. ಈ ಕಾದಂಬರಿ ಮುಖ್ಯವಾಗಿ ನಾಲ್ಕು ಸ್ತ್ರೀ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತದೆ. ಸ್ತ್ರೀ ಪಾತ್ರಗಳಲ್ಲಿ ಕೆಲವು ಪಾತ್ರಗಳ ಧೋರಣೆ ನಮ್ಮಂತಹ ಪೀಳಿಗೆಯವರಿಗೆ ಅತಿರೇಕವೇನೋ ಎನಿಸಿದರೂ ಅದೆಷ್ಟು ಗಟ್ಟಿಯಾಗಿವೆ ಎಂದರೆ ಓದುತ್ತಾ ಹೋದಂತೆ ಸಹಜವೇನೋ ಅನಿಸುವಷ್ಟರ ಮಟ್ಟಿಗೆ. ಇಲ್ಲಿನ ಸಹಜವಾದ ಕಥನ ಶೈಲಿಯಿಂದ ಪಾತ್ರಗಳು ನಮ್ಮಕಣ್ಮುಂದೆ ನಿಲ್ಲುತ್ತವೆ. ಇಲ್ಲಿನ ಪಾತ್ರಗಳ ಸಂಭಾಷಣೆ ನಮ್ಮನ್ನು ಅದೆಷ್ಟು ಕಾಡುತ್ತವೆ ಎಂದರೆ ನಾನಂತು ಸಂಭಾಷಣೆಗಳಿಗಾಗಿಯೇ ಈ ಕೃತಿಯನ್ನು ಎರಡು ಬಾರಿ ಓದಿದೆ. ಅದೇ ಈ ಕಾದಂಬರಿಯ ಜೀವಾಳವೆಂದರೆ ತಪ್ಪಾಗಲಾರದು. ಇಲ್ಲಿನ ಪ್ರತಿಯೊಂದು ಪಾತ್ರಗಳಲ್ಲೂ ಸಹಜ ಜೀವಂತಿಕೆಯಿದೆ. ಕಥಾನಕ ಪರಿಸರದ ಚಿತ್ರಣದಲ್ಲಿ ನೈಜತೆಯು ಹಾಸುಹೊಕ್ಕಾಗಿದೆ. ಆ ಕಾಲಕ್ಕೆ ಪುಟ್ಟ ತಾಯಿ ಚಿಚ್ಚಿ, ಚೆನ್ನಮ್ಮ ಹಾಗೂ ಬಸಮ್ಮಕ್ಕ ತಮ್ಮದೇ ರೀತಿಯಲ್ಲಿ ವ್ಯವಸ್ಥೆಯನ್ನು ಎದುರು ಹಾಕಿಕೊಂಡೇ ಬಂಡಾಯವೆದ್ದು ಗೆದ್ದವರು.ಇಂದಿನ ಅರುಂಧತಿ, ಗೌರಿಯರಿಗೆ ಹೋಲಿಸಿದರೆ ಅವರೇನು ಕಡಿಮೆಯಲ್ಲ. ಕೃತಿಯ ಬೆನ್ನುಡಿಯ ಮಾತುಗಳನ್ನು ಓದಿದಲ್ಲಿ ಸ್ವತಃ ಲೇಖಕಿಗೂ ಇಪ್ಷವಾದಂಥ ಪರಿಣಾಮಕಾರಿ ಸಂಭಾಷಣೆಗಳನ್ನು ಗಮನಿಸಬಹುದು. ಬೆನ್ನುಡಿಯಲ್ಲಿ ಇಲ್ಲದ ನನಗೆ ತುಂಬಾ ಇಷ್ಟವಾದಂಥ ಕೆಲವು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು 1.ಸರೋಜಿನಿಯ ಸ್ವಗತ : ಕೋರ್ಟಿನ ಆ ಹಸಿರು ಹಾಳೆಗಳ ಮೇಲಿನ ಎರಡು ಸಹಿ ನನ್ನನ್ನು ಮತ್ತೆ ನಿರಂಜನ ಪೂರ್ವದ ಸರೋಜಿನಿಯನ್ನಾಗಿಸಬಲ್ಲದೆ. ತಾವಿಬ್ಬರೂ ಜೊತೆಯಾಗಿ ಕಳೆದ ಆ 25 ವರ್ಷಗಳ ಸಾಂಗತ್ಯವನ್ನು ಶೂನ್ಯವಾಗಿಸ ಬಹುದೆ ಎಂದು ಸುಮ್ಮನಾಗುತ್ತಾಳೆ . 2.ಹೇಡಿತನ ಒಂದೊಂದ್ಸಲ ಒಳ್ಳೆತನದ ವೇಷ ಹಾಕಿಕೊಳ್ಳುತ್ತೆ 3. ಪರಿಚಯ ಜಾಸ್ತಿ ಆದ ಹಾಗೆ ಬೆರಗು ಸಾಯುತ್ತ ಹೋಗುತ್ತೆ ಆದರೆ ಅಷ್ಟರಲ್ಲಿ ಸಂಬಂಧ ಅಭ್ಯಾಸ ಆಗಿಹೋಗಿರುತ್ತದೆ . ಅದನ್ನು ನಿಭಾಯಿಸೋದು ವಾಡಿಕೆ ಆಗಿಹೋಗಿರುತ್ತದೆ ಅಥವಾ ಅದಕ್ಕೆ ಪರ್ಯಾಯ ಸಿಕ್ಕಿರೋಲ್ಲ. ನಿಮ್ಮಪ್ಪ ನಿಗೆ ಯಾವತ್ತೂ ಪರ್ಯಾಯಗಳ ಕೊರತೆ ಆಗಲೆ ಇಲ್ಲ ನೋಡು 4. ಬದುಕಲು ಬೇಕಾಗುವ ಬಹುಮುಖ್ಯ ಕಾರಣ ಇನ್ನೊಂದು ಜೀವಕ್ಕೆ ನನ್ನ ಅಗತ್ಯವಿದೆ. ಅದರ ಇರುವಿಕೆ ನನ್ನ ಇರುವಿಕೆ ಅನ್ನು ಅವಲಂಬಿಸಿದೆ ಎನ್ನುವ ಅರಿವು ಮತ್ತೊಬ್ಬರಿಗೆ ನಾವು ಬೇಕು ಎನ್ನುವುದೇ ಇಳಿವಯಸ್ಸಿಗೆ ದೊಡ್ಡ ಟಾನಿಕ್. ಬಹುಶಃ ಅದಕ್ಕೆ ಮೊಮ್ಮಕ್ಕಳೆಂದರೆ ಆ ಪರಿ ಪ್ರೀತಿ. 5. ನಿಜವಾದ ಕೆಡುಕು ಶಾಪ ಇರೋದಲ್ಲ ಮಗಳೆ. ಶಾಪ ಇದೆ ಎಂದು ಕೈಚೆಲ್ಲಿ ಕೂರುವುದು ಕೆಡುಕು. ಕೃತಿಯಲ್ಲಿನ ಪ್ರಮುಖ ಪಾತ್ರಗಳ ನಡುವೆ ನಮ್ಮ ಮನದಾಳಕ್ಕೆ ಇಳಿದು ನೆಲೆಸುವ ಪಾತ್ರವೆಂದರೆ ಸರೋಜಿನಿ. ' ಒಮ್ಮೆ ಕದಡಿದ ಕೊಳವು ಮತ್ತೆ ತಿಳಿಯಾಗಿರಲು ತಳದಿ ಮಲಗಿಹ ಕಲ್ಲು ನಿನ್ನ ನೆನಪು ನೂರು ಜನಗಳ ನಡುವೆ ನಕ್ಕು ನಲಿದಾಡಿದರೂ ಧುತ್ತನೆರಗುವ ದುಗುಡ ನಿನ್ನ ನೆನಪು ಎಲ್ಲ ವಾದದ ಕಡೆಗೆ ಆವರಿಸೊ ಮೌನದ ತರ್ಕ ಮೀರಿದ ಭಾವ ನಿನ್ನ ನೆನಪು ' ಮುರಿದ ದಾಂಪತ್ಯದ ನಡುವೆಯೂ ಅವಳನ್ನು ಕಾಡುತ್ತಿದ್ದ ಗಂಡನ ನೆನಪುಗಳ ತೀವ್ರತೆಯನ್ನು ತಿಳಿಸಲು ಮೇಲಿನ ಸಶಕ್ತ ಅನನ್ಯ ರೂಪಕಗಳೇ ಸಾಕು. ವಿವಾಹ ವಿಚ್ಛೇದನವನ್ನು ಕುರಿತ ಅವಳ ಮಾತುಗಳು, ಮೊಮ್ಮಕ್ಕಳನ್ನು ಪ್ರೀತಿಸುವುದರ ಬಗ್ಗೆ, ಒಂದು ರೀತಿಯಲ್ಲಿ ಎಲ್ಲಾ ಮದುವೆಗಳು ಅಫೋಷಿತ open marriage ಎನ್ನುವ ಅವಳ ಅಭಿಪ್ರಾಯ, ಮದುವೆಯನ್ನು ಕುರಿತು ಮಗಳು ತೆಗೆದುಕೊಂಡ ತೀರ್ಮಾನದ ಬಗ್ಗೆ ಅವಳ ತಲ್ಲಣಗಳು, ಇನಾಯಳ ಸಂಸಾರದ ಬಗ್ಗೆ ಅವಳ ಸಲಹೆಗಳು ಎಲ್ಲವೂ ಅವಳ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಸಫಲವಾಗಿವೆ ಒಲ್ಲದ ದಾಂಪತ್ಯದಿಂದ ತಣ್ಣಗೆ ದೂರ ಸರಿದ ರೀತಿ, ಅವಳ ನಿರ್ಭಾವುಕತೆಯಿಂದ ನಿರಂಜನನು ಜೀವಂತ ಶವದಂತಾದ ರೀತಿಯನ್ನು ನೋಡಿದಾಗ ರಾಮಾಯಣದ ಸೀತೆಯಿಂದ ತಿರಸ್ಕರಿಸಲ್ಪಟ್ಟ ರಾಮನ ನೆನಪಾಯಿತು. ಆ ಬಗ್ಗೆ ಗಂಡನು ಬರೆದುಕೊಂಡಾಗ ಅವಳಿಗೆ ನೋವಾಗಿದ್ದು ಅವಳಿಗಾಗಿ ಅಲ್ಲ ಅವನಿಗಾಗಿ ಅಂದರೆ ಪ್ರೀತಿಯ ಜಾಗದಲ್ಲೀಗ ಕರುಣೆ ಅಥವಾ ಮರುಕದ ಭಾವ ಮನೆ ಮಾಡಿತ್ತು. ಶಾಪದ ಪರಿಹಾರವಾಗಿ ಉಶ್ವಾಪದ ಪ್ರಸ್ತಾಪ ಎಲ್ಲವೂ ಅವಳ ಮಾಗಿದ ವ್ಯಕ್ತಿತ್ವದ ಘನತೆಯನ್ನು ತೋರುವುದರೊಂದಿಗೆ ಅವಳ ಮನೆತನದ ಶಾಪಕ್ಕೆ expiry date ಆಯ್ತು ಎನ್ನುವ ನಿರಾಳ ಭಾವನೆ ಓದುಗರ ಮನದಲ್ಲೂ ಮೂಡುತ್ತದೆ. ಬಸಮ್ಮಜ್ಜಿ ಮತ್ತು ಸರೋಜಿನಿಯ ಬಾಳಲ್ಲಿರುವ ಏಕೈಕ ಸಾಮ್ಯತೆ ಎಂದರೆ ಇಬ್ಬರೂ ತಮಗೆ ಒಲಿದ ಗಂಡಸರು ತಮ್ಮಿಂದ ವಿಮುಖರಾಗಿ ದೂರ ಸರಿದಾಗ ತಣ್ಣಗೆ ಪ್ರತಿಕ್ಷಿಯಿಸುವುದು. ಬಸಮ್ಮಜ್ಜಿಗೆ ಇಲ್ಲದ ಹಕ್ಕು ಸರೋಜಿನಿಗಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಅವಳ ಗಟ್ಟಿ ವ್ಯಕ್ತಿತ್ವಕ್ಕೆ ಒಪ್ಪುತ್ತದೆ. ಆರ್ಥಿಕ ಸ್ವಾತಂತ್ರ್ಯ, ಅಧಿಕಾರ ಎಲ್ಲವೂ ಇದ್ದು ಆರುಂಧತಿಯ ತನ್ನ ಪ್ರೀತಿಗೆ ಅಪಾತ್ರನಾದ ವಿವಾಹಿತನಿಗೆ ಒಲಿಯುವುದು, ಗೋಗರೆಯುವುದು, ಮಗುವಿಗಾಗಿ ಹಂಬಲ ಇದೆಲ್ಲವನ್ನೂ ನೋಡಿದಾಗ ಪ್ರೀತಿಯ ಸುಳಿಗೆ ಸಿಲುಕಿದ ಹೆಣ್ಣಿನ ಮನಸ್ಥಿತಿ ಮಾತ್ರ ಯಾವ ಕಾಲಕ್ಕೂ ಒಂದೇ ಎಂದು ಅನ್ನಿಸುವುದು. ಇನಾಯ ಗಂಡನಿಂದ ಹೊಡೆತ ತಿಂದು ಸಿಟ್ಟಿಗೆದ್ದರೂ, ತನ್ನನ್ನು ತನ್ನತನವನ್ನು ಬಿಡದೆ ಗಂಡನನ್ನು ಕ್ಷಮಿಸುವುದು ಒಳ್ಳೆಯ ತೀರ್ಮಾನವೇ ಆದರೂ ಅದರ ಹಿಂದಿರುವುದು ಪ್ರೀತಿ ಮಾತ್ರ ಎಂಬುದನ್ನು ನಿರಾಕರಿಸುವಂತಿಲ್ಲ. ಇನ್ನು ಸರೋಜಿನಿಯ ಮಗಳು ಗೌರಿಯ ಪ್ರಕಾರ ' ಹೆಣ್ಣನ್ನು ಮಾನಸಿಕವಾಗಿ ಗುಲಾಮರನ್ನಾಗಿಸುವ ವಿಷಯವೇ ಪ್ರೀತಿ ' ಆತ್ಮವಿಶ್ವಾಸವನ್ನಾದರೂ ಕುಗ್ಗಿಸುವ ಪ್ರೀತಿ ಬೇಕೇ ? ಎನ್ನುವ ಅವಳೂ ಪ್ರೀತಿಸಿ ಹೊಂದಾಣಿಕೆಯಾದಲ್ಲಿ ಮಾತ್ರ ಮದುವೆ ಅನ್ನುವ ಹಂತಕ್ಕೆ ಬರುತ್ತಾಳೆ. ಅಭಿಜ್ಞಾಳು ಸಹಾ ಷರತ್ತಿಲ್ಲದ ಲೀವ್ ಇನ್ ರಿಲೇಶನ್ ಶಿಪ್ ಗೆ ಒಪ್ಪಿ ಮದುವೆಯಾದರೂ ಭಾವನಾತ್ಮಕವಾಗಿ ಪೊಸೆಸಿವ್ನೆಸ್ ಇರಬೇಕು ಎನ್ನುವ ಹಂತಕ್ಕೆ ಬರುತ್ತಾಳೆ. ಈ ಎಲ್ಲ ಹೆಣ್ಣುಗಳು ವಿದ್ಯಾವಂತರಾಗಿ ಆರ್ಥಿಕವಾಗಿ ಸಬಲರಾಗಿದ್ದರೂ ಗಂಡಿನ ಪ್ರೀತಿಗಾಗಿ ಹಂಬಲಿಸುತ್ತಾರೆಂದರೆ ಸರ್ವಕಾಲಕ್ಕೂ ಹೆಣ್ಣಿಗೆ ಬೇಕಾದ್ದು ಪ್ರೀತಿ ಅದು ಅವರನ್ನು ದುರ್ಬಲಗೊಳಿಸಿದರೂ ಅಚ್ಚರಿಯಿಲ್ಲ ಎಂಬುದಕ್ಕೆ ಅವರ ಜೀವನದ ಗತಿಗಳೇ ಸಾಕ್ಷಿ. ಪುರುಷ ಪಾತ್ರಗಳಾದ ನಿರಂಜನ ಮತ್ತು ಶ್ರೀನಿವಾಸ ರೆಡ್ಡಿ ಪ್ರೀತಿಗೆ ಅಪಾತ್ರರಾಗಿದ್ದು ಹೆಣ್ಣಿನ ದೌರ್ಬಲ್ಯದೊಡನೆ ಆಟ ಆಡುವ ಪುರುಷ ಪ್ರಧಾನ ಸಮಾಜದ ಪ್ರತಿನಿಧಿಗಳಂತೆ ಕಾಣುತ್ತಾರೆ.ರಾಮಚಂದ್ರನ ವರ್ತನೆಯೂ ಸ್ಟಲ್ಪ ಅತಿರೇಕವೇ ಎನಿಸುತ್ತದೆ. ಮ್ಯಾಥ್ಯೂ ಪ್ರೀತಿಯ ಹಂಬಲವಿರುವ ಓಬ್ಬ ಪ್ರಾಮಾಣಿಕನಾಗಿ ಕಾಣುತ್ತಾನೆ. ಕೃತಿಯ ಶೀರ್ಷಿಕೆಯು ಅದೆಷ್ಟು ಸೂಕ್ತವಾಗಿದೆಯೆಂಬುದು ಕೃತಿಯ ಹೂರಣವನ್ನು ಸವಿದಾಗಲೆ ಅರಿವಾಗುವುದು. ಇನ್ನು ಕೃತಿಯನ್ನು ಓದಿ ಮುಗಿಸಿದ ನಂತರ ಮುಖಪುಟದತ್ತ ಗಮನ ಹರಿದಾಗ ತೆರೆದ ಬಾಗಿಲ ಚಿತ್ರವನ್ನು ನೋಡಿದಾಗ ಇಲ್ಲಿನ ಎಲ್ಲಾ ಪಾತ್ರಗಳೂ ಸಹಾ ತೆರೆದ ಬಾಗಿಲಂತೆಯೆ ಮನ ಬಿಚ್ಚಿ ಮುಕ್ತವಾಗಿ ಮಾತನಾಡುತ್ತವೆ. ತಾತ್ಕಾಲಿಕ ತಂಗುದಾಣದಲ್ಲಿ ಇರುವಂತೆ ಮುಖಪುಟದಲ್ಲಿ ಕಾಣುವ ಪುರುಷರ ಉಡುಗೆ ಗಳು ಸರೋಜಿನಿ, ಅರುಂಧತಿ ಹಾಗೂ ಅಭಿಜ್ಞಾ ಇವರುಗಳ ಬಾಳಲ್ಲಿ ಬಂದು ಹೋದ ಪುರುಷ ಪಾತ್ರಗಳ ಸಂಕೇತವಾಗಿರ ಬಹುದೆ ಎನಿಸಿತು. ಲೇಖಕಿಯು ಇದು ಉಪಸಂಹಾರವಲ್ಲ ಎಂದು ಹೇಳಿದರೂ ಸಹ ಗಟ್ಟಿಗಿತ್ತಿಯರಾದ ಇಲ್ಲಿನ ಸ್ತ್ರೀ ಪಾತ್ರಗಳು ನೆಮ್ಮದಿಗಾಗಿ ತಮ್ಮದೇ ಮಾರ್ಗದಲ್ಲಿ ಭರಪೂರ ಆತ್ಮವಿಶ್ವಾಸದ ಜೊತೆಗೆ ಮುನ್ನಡೆ ಸಾಧಿಸುವ ಮೂಲಕ ಪೂರ್ಣವಿರಾಮ ಹಾಕಿದ್ದಾರೆ ಸಮಸ್ಯೆಗಳು ಬಂದಾಗ ಕೈಚೆಲ್ಲಿ ಕೂರದೇ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂಬುದನ್ನು ಸರೋಜಿನಿಯ ಜೀವನ ಸಾದರ ಪಡಿಸಿದೆ. ಕೈಗೆತ್ತಿಕೊಂಡ ಮೇಲೆ ಓದಿ ಮುಗಿಸದೆ ಬಿಡಲಾಗದ ಕೃತಿ ಎನ್ನಬಹುದು. ಅನಗತ್ಯವಾದ ಯಾವುದೂ ಎಲ್ಲಿಯೂ ಕಾಣದೆ ಓದುಗರನ್ನು ತನ್ನದೇ ಗುಂಗಿನಲ್ಲಿಡುವಷ್ಟು ಸಶಕ್ತವಾದ ಸಂವೇದನಾಶೀಲ ಕಾದಂಬರಿ . ಎಂ. ಆರ್. ಅನಸೂಯ .