Powered By Blogger

Sunday, October 25, 2020

ಗಿರಿಜಾ ಶಾಸ್ತ್ರಿ - " ಕೊಳದ ಮೇಲಿನ ಗಾಳಿ " { ಎಮ್. ಆರ್. ಕಮಲಾ -ಪು. ತಿ. ನ ಕವಿತೆಗಳ ಓದಿನ ಪರಿಣಾಮ ಪ್ರಬಂಧಗಳು }GIRIJA SHASTRI / M. R. KAMALA

 ಕಟು ಮಧುರದ ಗೀತೆ......

ಕೊಳದ ಮೇಲೆ ಬೀಸಿ ಬರುವ ಗಾಳಿಯೆಂದರೆ ತಂಪಾದ ಆಹ್ಲಾದಕರ ಗಾಳಿಯೆಂದೇ ಅರ್ಥ. ಆದರೆ ಅದು ಒಮ್ಮೊಮ್ಮೆ ಮಧ್ಯಾಹ್ನದ ಬಿರುಬಿಸಿಲಿನಲ್ಲೂ ಬೀಸಬಹುದು. ಆಗ ಆ ಗಾಳಿಗೆ ಬಿಸಿಲ ಧಗೆ ಇರುವುದು ಸಹಜ. ಜೀವನ ಎಂದರೆ ಕೇವಲ ಸುಖದ ಆಖ್ಯಾನ ಮಾತ್ರವಲ್ಲ. ಕಷ್ಟದ ಕಟು ಆಖ್ಯಾನವೂ ಹೌದು.
ಪುತಿನ ಅವರ ಕವಿತೆಗಳಲ್ಲಿ ಕಾಣುವ ಇಂತಹ ಕಟು ಮಧುರದ ಆಖ್ಯಾನದ ಜೊತೆಗೆ ಕಮಲಾ ಅನುಸಂಧಾನ ಮಾಡಿದ್ದಾರೆ.
ಪು.ತಿ.ನ ಎಂದ ಕೂಡಲೇ ನನ್ನ ನೆನಪಿನ ಬುತ್ತಿಯಿಂದ ಹೊರಗೆ ಇಣುಕುವುದು ‘ಬಹನು ಬರುತಿಹನವ್ವ ಬಂದನು ಬಂದರೇ ಗತಿ ಕಾಣೆನೇ’ ಎನ್ನುವ ಪ್ರೇಮಿಯೊಬ್ಬಳ “ಪ್ರತೀಕ್ಷೆ”ಯ ಸಾಲುಗಳು, "ಈಚಲು ಮರದ ಕೆಳಗಿ”ನ ಪ್ರಬಂಧಗಳು, ಸಾಂಪ್ರದಾಯಕ ನಿಲುವಿನಲ್ಲೂ ಒಡಮೂಡಿದ “ಅಹಲ್ಯೆ”ಯ ಬಗೆಗಿನ ಮಾನವೀಯ ಕಳಕಳಿ. ಇವುಗಳಲ್ಲಿ ಕಾಣುವ ದೃಷ್ಟಿಕೋನವೇ ಪು.ತಿ.ನ ಅವರ ಈ ಕವಿತೆಗಳಲ್ಲಿಯೂ ಬಿಡಿ ಬಿಡಿಯಾಗಿ ಕೋದುಕೊಂಡಿವೆ.
ಕೊಳದ ಮೇಲಿನ ಗಾಳಿ ಬೀಸುವಾಗ ಇಕ್ಕೆಲಗಳ ಮರಗಿಡ ಬಳ್ಳಿಗಳ ಘಮಲನ್ನೂ ಹೊತ್ತು ತರುವುದುಂಟು. ಹಾಗೆಯೇ ಪು.ತಿ.ನ ಅವರ ಕವಿತೆಗಳು ಬದುಕಿನ ಅನೇಕ ಕಷ್ಟ ಸುಖದ ಬಣ್ಣ ವಾಸನೆಗಳನ್ನು ಓದುಗರಿಗೆ ದಾಟಿಸುವ ಬಗೆಯನ್ನು ಲೇಖಕಿ ತಮ್ಮ ವೈಯಕ್ತಿಕ ಬದುಕಿನ ಆಖ್ಯಾನದ ಸಣ್ಣ ಪುಟ್ಟ ಘಟನೆಗಳೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತಾ, ಕವಿತೆಯನ್ನು ವಿಸ್ತರಿಸುವುದು, ಕವಿತೆಯನ್ನು ಅರ್ಥೈಸುವ ಹೊಸ ಬಗೆಯಾಗಿದೆ. ಈ ಹೊಸ ಬಗೆ ಇನ್ನಷ್ಟೇ ಸಾಹಿತ್ಯ ಲೋಕದಲ್ಲಿ ಸ್ವೀಕೃತಗೊಂಡು ಚಲಾವಣೆಗೆ ಬರಬೇಕಾಗಿದೆ. ಅದಕ್ಕೆ ಕಾಯಬೇಕಾಗಿದೆ.
ಇದು ಲೇಖಕಿಯ ವಸ್ತುನಿಷ್ಠ ಬರಹಗಳ ಮೇಲೆ ಪು.ತಿ.ನ ಕವಿತೆಗಳು ಬೀರಿದ ಪ್ರಭಾವಕ್ಕೆ ಸಾಕ್ಷಿಯೂ ಆಗಿದೆ. ಇದಕ್ಕೆ ಉದಾಹರಣೆಯಾಗಿ ಒಂದೆರೆಡು ಕವಿತೆಗಳನ್ನು ನೋಡಬಹುದು.
“ಪ್ರತೀಕ್ಷೆ” ಕವಿತೆಯ ಪ್ರೇಮಿಯ ತಲ್ಲಣ “ಅಹಲ್ಯೆ” ಗೀತನಾಟಕದಲ್ಲಿ ಮುಂದುವರಿದಿದೆ. ಅದರ ಒಂದು ತುಣುಕೇ "ಹೆಣ್ಣೊಬ್ಬಳ ಕಣಸು" ಕವಿತೆಯಲ್ಲಿ ಪ್ರತಿಫಲನಗೊಂಡಿದೆ. ಬದುಕಿನ ಪಯಣದ ಯಾವುದೋ ತಿರುವಿನಲ್ಲಿ ಕಾಣುವ ಒಂದು ಮುಖ ಗಕ್ಕನೆ ಹಿಡಿದು ನಿಲ್ಲಿಸುವುದುಂಟು. ಅದರ ಆಕರ್ಷಣೆ, ಸೆಳವಿಗೆ ಹೆಸರಿಲ್ಲ. ಅದು ಆ ಕ್ಷಣದ ಸತ್ಯವಷ್ಟೇ. ಅದಕ್ಕೆ ಭವಿಷ್ಯವಿಲ್ಲ. ಒಂದು ಕ್ಷಣ ಮಿಂಚಿ ಮಾಯವಾಗುವಂತಹುದು. ಹೀಗೆ ಮಿಂಚಿ ಮಾಯವಾಗುವ ಆಕರ್ಷಣೆಯನ್ನು ಹೀನವಾಗಿ ನೋಡುವುದೇಕೇ? ಎನ್ನುವುದು ಕವಿಯ ಅಭಿಪ್ರಾಯ. ಲೇಖಕಿ ಇದನ್ನು ಅನುಸಂಧಾನ ಮಾಡಿರುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಎಲ್ಲರ ಬದುಕಿನಲ್ಲಿಯೂ ಹಾದು ಹೋಗುವ ಈ ಗಳಿಗೆಗಳು ತನ್ನ ಬದುಕಿನಲ್ಲಿಯೂ ಹಾದು ಹೋಗಿವೆ ಎಂದು ಹೇಳುವುದಕ್ಕೆ ಧೈರ್ಯ ಬೇಕು. ಕವಿಯ ಸಾಂಪ್ರದಾಯಕ ಮನಸ್ಸಿನಲ್ಲಿಯೂ ಬದುಕಿನ ವಾಸ್ತವವನ್ನು ಸಹಜವೆನ್ನುವಂತೆ ಒಪ್ಪಿಕೊಳ್ಳುವ ಒಂದು ಔದಾರ್ಯದ ಸೆಲೆ ಇರುವಂತೆ, ಲೇಖಕಿಯಲ್ಲಿಯೂ ಇದೆ. ಸಾಂಪ್ರದಾಯಕತೆಯಲ್ಲಿ ಕುಡಿಯೊಡೆಯುವ ಆಧುನಿಕತೆ ಇದು. ಇದೇ ಔದಾರ್ಯ"ಪತಿತ ಪಾವನ" ಕವಿತೆಯಲ್ಲಿಯೂ ಕಂಡು ಬರುತ್ತದೆ. ರಾಮನನ್ನು ಪತಿತ ಪಾವನ ಎಂದು ಪೂಜಿಸುವ ಜನರೇ ಯಾವುದೋ ಅನಿವಾರ್ಯ ಕಾರಣಕ್ಕೆ ಕಾಲು ಜಾರಿದ ಹೆಣ್ಣನ್ನು ಪತಿತೆ ಎಂದು ಅವಳನ್ನು ಜನ ಹೀನಾಯವಾಗಿ ಕಾಣುವ ಅವರ ಪೂರ್ವಾಗ್ರಹವನ್ನು ಕವಿ ಬಯಲಿಗೆಳೆದರೆ ಲೇಖಕಿ ಇಂತಹ ಶುದ್ಧತೆಯ ಅಗತ್ಯ ವಿದೆಯೇ? ಇದು ಅಂತರಂಗಕ್ಕೆ ಸಂಬಂಧಿಸಿದ್ದು ಎನ್ನುತ್ತಾ ಹೆಣ್ಣುಮಕ್ಕಳು ಬದುಕನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿತುಕೊಳ್ಳಬೇಕು ಎಂದು ತಮ್ಮ ಊರಿನ ಪಂಚಾಯತಿಯೊಂದರಲ್ಲಿ ಹೆಣ್ಣು ಮಗಳೊಬ್ಬಳು "ನಾನು ಮುಡಿದ ಮಲ್ಲಿಗೆಯನ್ನು ಅವಳೊಂದು ಗಳಿಗೆ ಮುಡಿದಿದ್ದಾಳೆ ನಿಮಗ್ಯಾಕೆ" ಎಂದು ಗದರಿಸಿ ಓಡಿಸುವ ಉಲ್ಲೇಖ ಮಾಡುತ್ತಾರೆ.
"ರಂಗವಲ್ಲಿ" ಕವಿತೆಯಲ್ಲಿ ಮುಪ್ಪಿನ ಮುದುಕಿಯೊಬ್ಬಳು ಬೆಟ್ಟಹತ್ತಿ ದೇವಾಲಯದ ಮುಂದೆ ರಂಗೋಲಿ ಬಿಡಿಸುತ್ತಾಳೆ. ಇಲ್ಲಿ ಅವಳ ಶ್ರದ್ಧೆ ಭಕ್ತಿ ಯನ್ನು ಕವಿ ಬಯಲು ಮಾಡಿದ್ದರೆ ಲೇಖಕಿ ಮನೆಯವರ ತಿರಸ್ಕಾರಕ್ಕೆ ಒಳಗಾಗಿರುವ ಇಂದಿನ ವೃದ್ಧರ ಸ್ಥಿತಿಯ ಬಗೆಗೆ ಗಮನ ಸೆಳೆಯುತ್ತಾರೆ.
ಹೀಗೆ ಪು.ತಿ.ನ ಅವರ ಕವಿತೆಗಳನ್ನು ಒಂದು ನೆಪವಾಗಿಟ್ಟುಕೊಂಡು ಲೇಖಕಿ ಅವುಗಳ ಓದಿನ ಪರಿಣಾಮದ ಜೊತೆಗೆ ತಮ್ಮ ಬದುಕಿನ ಅನುಭವಗಳನ್ನು ಒರೆಹಚ್ಚಿ ನೋಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಒಂದು ರೀತಿಯ ಕೈಪಿಡಿಯೂ ಆಗಿದೆ. ಕಮಲಾ ಅವರಿಗೆ . ಅಭನಂದನೆಗಳು
You, Girija Shastry, Anupama Prasad and 131 others

ಎಲ್. ಸಿ. ಸುಮಿತ್ರಾ - ನರೇಂದ್ರ ರೈ ದೇರ್ಲ ಅವರ " ಹಳ್ಳಿಯ ಆತ್ಮಕತೆ "{ 2020 } L. C. SUMITRA / NARENDRA RAI DERLA

 ಲೇಖಕ ರೂ, ಕನ್ನಡ ಅಧ್ಯಾಪಕ ರೂ,ಕೃಷಿಕರೂ ಆದ ಗೆಳೆಯ ನರೇಂದ್ರ ರೈ ದೇರ್ಲ ಅವರ ಮೂರು ಕೃತಿಗಳನ್ನು ಇತ್ತೀಚೆಗೆ ಓದಿದೆ. ಈವರೆಗೆ ಅವರು ಬರೆದ ಕೃಷಿ, ಗ್ರಾಮೀಣ ಸಂಸ್ಕೃತಿ, ಪರಿಸರಕ್ಕೆ ಸಂಬಂಧಿಸಿದ ಬರಹಗಳ ಮುಂದುವರಿದ ಚಿಂತನೆ ಗಳು ಇಲ್ಲಿ ಯೂ ಇದ್ದರೂ ಕರೋನ ಎಂಬ ಸಾಂಕ್ರಾಮಿಕ ತಂದ ಬದಲಾವಣೆ ಗಳು, ಕೃಷಿ ಬದುಕಿನ ಮೇಲೆ ಮಾಡಿದ ಪರಿಣಾಮಗಳನ್ನು ಚಿತ್ರಿಸಿದ್ದಾರೆ..

"ಹಳ್ಳಿಯ ಆತ್ಮಕಥೆ "ದೇರ್ಲ ಎಂಬ ಹಳ್ಳಿಯ ಅರ್ಧ ಶತಮಾನದ ಕಥೆ..ಇದು ಲೇಖಕ ರ ಬಾಲ್ಯದ ಆತ್ಮ ಕಥನ ವನ್ನು ಒಳಗೊಂಡಿದೆ ಯಾದರೂ ಇಲ್ಲಿ ಹಳ್ಳಿ ಯ ಪ್ರಾಕೃತಿಕ ಪರಿಸರ, ತರವಾಡಿನ ಜೀವನ ಶೈಲಿ, ಕೃಷಿ ಕರ ಬವಣೆ, ರಬ್ಬರ್ ನಂತಹ ಹೊರಗಿನ ಕೃಷಿ ಬಂದಾಗ ಆದ ಸ್ಥಳೀಯತೆಯ ನಾಶ ಹೀಗೆ ಹಲವು ವಿಷಯ ಗಳು ಕೇಂದ್ರ ದಲ್ಲಿವೆ. ಈ ಕುರಿತು ಲೇಖಕ ರೈಹೇಳುವುದು ಹೀಗೆ. "ಇಲ್ಲಿ ಹದಿನೆಂಟು ಪ್ರಬಂಧಗಳಿವೆ. ಎಲ್ಲವೂ ನನ್ನ ನ್ನು ಸೇರಿಸಿಯೇ ನನ್ನೂರನ್ನು ಕಟ್ಟಿ ಕೊಡುತ್ತವೆ. ಇದು ನನ್ನ ಆತ್ಮ ಕಥೆ ಯೂ ಹೌದು, ನನ್ನೂರ,ನನ್ನೂರವರ ಆತ್ಮ ಕತೆಯೂ ಹೌದು. ಹಾಗೆ ನೋಡಿದರೆ ಈ ಜಗತ್ತಿನ ಯಾವುದೇ, ಯಾರದೇ ಆತ್ಮ ಕಥೆ ಕೇವಲ ಒಬ್ಬನ, ಒಂದು ಮನೆ ಕುಟುಂಬದ ಆತ್ಮ ವೃತ್ತಾಂತ ವಾಗಿ ಉಳಿಯದು."
ಈ ಪುಸ್ತಕ ದ ಮುಖಪುಟ ದಲ್ಲಿ ವೃದ್ಧ ವ್ಯಕ್ತಿ ಯ ಚಿತ್ರ ವಿದೆ. ಇದು ಇವತ್ತಿನ ನಮ್ಮ ಹಳ್ಳಿ ಗಳ ಹಣ್ಣಾದ ಪರಿಸ್ಥಿತಿ ಯನ್ನು ಸೂಚಿಸುವಂತಿವೆ. ಕೊಳ್ಳುಬಾಕ ಸಂಸ್ಕೃತಿಯ ಅಲೆಯಲ್ಲಿ ಪ್ರಪಂಚವೇ ತೇಲುತ್ತಿರುವ ಈ ಸ್ಥಿತಿಯಲ್ಲಿ ಹಳ್ಳಿ ಯ ಬದುಕೂ ಅದರಿಂದ ದೂರ ಇರಲು ಸಾಧ್ಯವಿಲ್ಲ ಎನ್ನುವ ವಾಸ್ತವ ಚಿತ್ರವಿದೆ..
ತಂದೆಯ ವ್ಯಸನಗಳಿಂದಾಗಿ ತಾಯಿ ಅನುಭವಿಸಿದ ಕಷ್ಟ, ತಂದೆ ಕುಂಬ್ರದಿಂದ ,ದೇರ್ಲಕ್ಕೆ ವಾಸ ಬದಲಾಯಿಸಿ ದಾಗ ,ಹೊಸ ಜಾಗದಲ್ಲಿ ಗದ್ದೆಮಾಡಿದಾಗ ಚಿಕ್ಕ ಹುಡುಗ ನರೇಂದ್ರ ನ ಅನುಭವ ಗಳು, ಅಮ್ಮ,ಅಪ್ಪ, ಗಾಂಧಿ ಯನ್ನು ಹತ್ತಿರ ತಂದ ಅಜ್ಜ, ಮೇಷ್ಟ್ರು, ಎಲ್ಲ ರೂ ಆಪ್ತ ವಾಗಿ ಚಿತ್ರಿಸಲ್ಪಟ್ಟಿದ್ದಾರೆ. ದೇರ್ಲದ ಹಳೆಯಮನೆ ಯಲ್ಲಿ ಬುಟ್ಟಿ ಹೆಣೆಯುವ ಹವ್ಯಾಸದಲ್ಲಿ ಬದುಕಿನ ಬಹುಭಾಗವನ್ನು ಕಳೆಯುವ ಅಜ್ಜಿ, ಯ ಬುಟ್ಟಿ ನೇಯ್ಗೆ ಎಷ್ಟೇ ಕಲಾತ್ಮಕ ವಾಗಿದ್ದರೂ ಮನೆಯವರಿಗೆ ಅಜ್ಜಿ ಯ ಕಣ್ಣಿಗೆ ಅದರಿಂದ ತೊಂದರೆ ಎಂದು ಅದನ್ನು ನಿಲ್ಲಿಸಲು ಪ್ರಯತ್ನ ಮಾಡುವುದು ಅಜ್ಜಿ ಜಗ್ಗದೆ ಮುಂದುವರೆಸುವುದು..ಒಂದು ರೂಪಕದಂತೆ ಕಾಣಿಸುತ್ತದೆ.
ಮಹಾಮನೆಯಲ್ಲಿ ನಡೆಯುವ ಭೂತ,ಕೋಲ, ಯಕ್ಷಗಾನ ದಂತಹ ಆಚರಣೆ ಗಳು ಇಂದಿಗೂ ಬಂಧುಗಳನ್ನು ಒಂದೆಡೆ ಸೇರಿಸುವ ಆಚರಣೆ ಗಳಾಗಿವೆ. ಅವುಗಳ ಹಿಂದಿನ ನಂಬಿಕೆ ಗಳು ಏನೇ ಆಗಿರಲಿ ಅವುಗಳಲ್ಲಿ ಗುಣಾತ್ಮಕ ಅಂಶಗಳು ಇವೆ ಎಂದು ಗುರುತಿಸಿದ್ದಾರೆ.
ನಿರೂಪಕ ಬಾಲ್ಯದ ಲ್ಲಿ ಏನೇ ಆರ್ಥಿಕ ಕಷ್ಟ ಗಳಿದ್ದರೂ ಸಾಮಾಜಿಕ ಮನ್ನಣೆಯ ಕುಟುಂಬದ ಲ್ಲಿ ಹುಟ್ಟಿದ್ದರಿಂದ ಬರುವ ಆತ್ಮ ವಿಶ್ವಾಸ ಅವರಲ್ಲಿತ್ತು..ಇದು ಹಳ್ಳಿಯ ಕೃಷಿ ಕಾರ್ಮಿಕರಿಗೆ ಇರಲು ಸಾಧ್ಯವಿಲ್ಲ. ಅವರು ಇನ್ನೊಬ್ಬ ರ ಜಮೀನಿನ ಲ್ಲಿ ದುಡಿಯುವ ಬದಲು ಪೇಟೆಯಲ್ಲಿ ಗಾರೆ ಕೆಲಸ ,ರಿಕ್ಷಾ ಓಡಿಸುವುದು ಅಥವಾ ಬೆಂಗಳೂರಿನ ಂತಹ ಊರಿಗೆ ಹೋಗಿ ಕಟ್ಟಡ ಕಾರ್ಮಿಕ ರಾಗುವುದು ನಡೆಯುತ್ತದೆ.. ಪರಿಣಾಮ ಕೃಷಿ ಕೆಲಸಕ್ಕೆ ಜನರ ಕೊರತೆ..ಮೊನ್ನೆ ಕೊರೊನಾ ಆರಂಭದಲ್ಲಿ ಪಟ್ಟಣದಿಂದ ಹಳ್ಳಿ ಯ ಕಡೆಗೆ ಹೊರಟ ಮಹಾವಲಸೆ..(ಪುನರ್ ವಲಸೆ) ..ಹೀಗೆ ಮರಳಿ ಬಂದವರಲ್ಲಿ ಕೆಲವರು ಕೃಷಿ ಯಲ್ಲಿ ತೊಡಗಿ ದ್ದಾರೆ.
ದೇರ್ಲ ಕ್ಕೆ ರೇಡಿಯೋ, ಬಂದಾಗ, ಟಿ ವಿ ಬಂದಾಗ ಆದ ಬದಲಾವಣೆ ಗಳನ್ನು , ಶಾಲೆ ಗೆ ಸೇರಲು ಹೋದಾಗ ತಮ್ಮ ಹೆಸರನ್ನು ತಾವೇ ಇಟ್ಟುಕೊಂಡ ಪ್ರಸಂಗವನ್ನು ಸ್ವಾರಸ್ಯ ಕರವಾಗಿ ದಾಖಲಿಸಿದ್ದಾರೆ. ಹಳ್ಳಿ ಯ ಬದುಕು ಬದಲಾಗಿದೆ,ಬದಲಾವಣೆ ಅನಿವಾರ್ಯ, ಎಂಬ ಅರಿವಿನ ಜತೆಗೆ ಬದಲಾವಣೆ ಯ ನಡುವೆ ನಾವು ಉಳಿಸಿಕೊಳ್ಳಬೇಕಾದ ಅನೇಕ ಮೌಲ್ಯ ಗಳು ಮರೆಯಾಗುತ್ತಿರುವುದರ ಕುರಿತು ಲೇಖಕ ರ ಕಾಳಜಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಐ ಟಿ ಯಿಂದ ಮೇಟಿಗೆ ಎಂಬ ಪುಸ್ತಕವನ್ನು ಬರೆದು ಸಾಫ್ಟವೇರ್ ಉದ್ಯೋಗವನ್ನು ಬಿಟ್ಟು ಕೃಷಿಗೆ ಮರಳಿದ ನರೇಂದ್ರ ರೈ ಅವರ ನೆರೆಯವರೇ ಆದ
Vasanth Kaje
ಯವರಂತಹ ತರುಣರು ಭರವಸೆ ಮೂಡಿಸುತ್ತಾರೆ.ಕೃಷಿ ಯಿಂದ ಲೇ ಬದುಕು ರೂಪಿಸಿಕೊಂಡು ಶ್ರೀ ಂಗೇರಿಯ ಕಾಡಿನ ನಡುವೆ ಹಲವಾರು ಪ್ರಾಕೃತಿಕ ಸವಾಲುಗಳನ್ನು ಎದುರಿಸುತ್ತಿರುವ
Srinivasa Murthy
ಯವರು ಇನ್ನೊಂದು ಮಾದರಿ. ಕೂನಬೇವು ಎಂಬ ಬಯಲುಸೀಮೆಯಲ್ಲಿ ನೆಲೆಸಿ ಬೇಸಾಯದ ಕಥೆಯನ್ನು ಬರೆದಿರುವ
ಚಂಸು ಪಾಟೀಲ
ರದು ಮತ್ತೊಂದು ಮಾದರಿ. ರೈತರಿಗೆ ಮಂಗನ ಕಾಟದಿಂದ ಬೆಳೆಯನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟ ಎಂದು ಓದುವಾಗ ಶ್ರೀ ನಿವಾಸ ಮೂರ್ತಿ ಯವರ ಅನುಭವದ ಬರಹ ನೆನಪಾಯಿತು. ಆಧುನಿಕ ಸೌಲಭ್ಯ ಗಳ ಜತೆಗೆ ಕೃಷಿ ಯನ್ನೂ , ಹಳ್ಳಿ ಯ ಆತ್ಮ ವನ್ನು ಉಳಿಸಿಕೊಳ್ಳುವ ಅಗತ್ಯ ವನ್ನು ದೇರ್ಲ ಅವರು ಮನಗಾಣಿಸಿದ್ದಾರೆ. ಅವರಿಗೆ ಅಭಿನಂದನೆಗಳು.. ನರೇಂದ್ರ. ರೈ ದೇರ್ಲ ರಂತಹ ಕೃಷಿ ಯಲ್ಲಿ ಸ್ವಾನುಭವ ವುಳ್ಳ ವರ ಬರಹದ ತೂಕವೆ ಬೇರೆ ,ಇಂಟರ್ನೆಟ್ ಮಾಹಿತಿಯ ಪರಿಸರ ತಜ್ಞ ರ ಬರಹದ ಮಿತಿಯನ್ನು ಈ ಪುಸ್ತಕ ತಿಳಿಸುತ್ತದೆ.
Narendra Rai Derla
.
You, Purushottama Bilimale, Girija Shastry and 45 others
18 Comments
Like
Comment

Saturday, October 24, 2020

Shivakotyacharyana Vaddaradhane-1/1by Pro. A. R . Mitra - ವಡ್ದರಾಧನೆ -ಅ. ರಾ. ಮಿತ್ರ

ಡಾ / ಮಹೇಶ್ವರಿ ಕಾಸರಗೋಡು - ಶಿವರಾಮ ಕಾರಂತರ ಪತ್ರ ಸಾಹಿತ್ಯ - Dr MAHESHVARI KASARAGOD -Shivarama Karanth

https://www.facebook.com/balavana.puttur/videos/2691932344378424 

ಎಂ ಹರಿದಾಸ ರಾಯರೆಂಬ ಅಚ್ಚಗನ್ನಡದ ಕೂಸು. ಕನ್ನಡಬರಹ...ಸರ್ವಮಂಗಳಾ ಶಾಸ್ತ್ರಿ - Sarvamangala Shastry | M. HARIDAS RAO kannada Writer

ಎಂ ಹರಿದಾಸ ರಾಯರೆಂಬ ಅಚ್ಚಗನ್ನಡದ ಕೂಸು. ಕನ್ನಡಬರಹ... - Sarvamangala Shastry | Facebook