Powered By Blogger

Sunday, October 17, 2021

ಉದಯಕುಮಾರ ಹಬ್ಬು- " ಅಸಂಗ " { ರಾಘವೇಂದ್ರ ಪ್ರಭು ಅವರ ಕಥಾ ಸಂಕಲನ }

"ಅಸಂಗ" ಎಂಬ ವಿಶಿಷ್ಟ ಶೀರ್ಷಿಕೆಯನ್ನು ಹೊತ್ತ ಈ ಕಥಾಸಂಲನವನ್ನು ಬರೆದವರು ಶ್ರೀ ರಾಘವೇಂದ್ರ ಪ್ರಭುಗಳು, ಕೆನರಾ ಕಾಲೇಜು, ಮಂಗಳೂರಿನಲ್ಲಿ ಮೂರು ದಶಕಗಳ ಕಾಲ ಇತಿಹಾಸ ಪ್ರಾಧ್ಯಾಪಕರಾಗಿ ೧೯೯೮ ರಲ್ಲಿ ನಿವೃತ್ತಿಗೊಂಡವರು. ಈ ಕೃತಿಕಾರನ ವಿಶೇಷತೆ ಏನೆಂದರೆ ತಮ್ಮ‌,೮೦ ರ ಪ್ರಾಯದಲ್ಲಿ ಇಂಥದೊಂದು ಅಚ್ಚುಕಟ್ಟಾದ ಅರ್ಥಪೂರ್ಣ ಕಥಾಸಂಕಲನ ಪ್ರಕಟಿಸಿದ್ದುದು. ಈ ಸಣ್ಣ ಕತೆಗಳನ್ನು ಬರೆಯಲು ಹಲವಾರು ಗ್ರಂಥಗಳನ್ನು ಓದಿದ್ದಲ್ಲದೆ ಡಾ ನಾ ದಾಮೋದರ ಶೆಟ್ಟರ ಶಿಷ್ಯತ್ವ ಪಡೆದು ಬರವಣಿಗೆಯ ಬಗ್ಗೆ ತರಬೇತು ಪಡೆದವರು. ಇಷ್ಟಲ್ಲದೆ ಜನಪ್ರಿಯ ಕಾದಂಬರಿಕಾರ, ಕಥೆಗಾರ ಡಾ. ಕೆ. ಎನ್.‌ಗಣೇಶಯ್ಯ ಅವರ ಬೆಂಬಲ ಮತ್ತು ಪ್ರೇರಣೆ. ಈ ಕಥಾಸಂಕಲನದ ಶೀರ್ಷಿಕೆ "ಅಸಂಗ". ಈ ಪದ ಬೃಹದಾರಣ್ಯಕೋಪಷನಿತ್ತನಲ್ಲಿ ಬರುವ ಪದ. ಅಸಂಗ ಎಂದರೆ ಸಂಗರಹಿತ, ಏಕಾಂಗಿ.unattached ಎಂಬೀ ಅರ್ಥವನ್ನು ಈ ಕತೆಗಳ ಮೂಲಕ ಹೇಳಲು ಪ್ರಭುಗಳು ಪ್ರಯತ್ನಿಸಿದ್ದಾರೆ. ಪ್ರಭುಗಳ ಓದಿನ ಹರಹು ತುಂಬ ವಿಶಾಲವಾದುದು. ಸನಾತನ ಧರ್ಮದ ಉದ್ಗ್ರಂಥಗಳನ್ನು ಅಧ್ಯಯನ ಮಾಡಿರುವರಲ್ಲದೆ ಜಿಡ್ಡು ಕೃಷ್ಣಮೂರ್ತಿ, ಓಶೋ ಇವರ ವಿಚಾರಗಳನ್ನು ಕೂಡ ಇಲ್ಲಿನ ಕತೆಗಳಲ್ಲಿ ಬಳಕೆಯಾಗಿವೆ. ಮನುಷ್ಯ ಏಕಾಂಗಿಯಾಗಿಯೆ ಈ ಭೂಮಿಯಲ್ಲಿ ಹುಟ್ಟುತ್ತಾನೆ, ಏಕಾಂಗಿಯಾಗಿಯೆ ಇಲ್ಲಿಂದ ನಿರ್ಗಮಿಸುತ್ತಾನೆ.‌ವ್ಯಕ್ತಮಧ್ಯದಲ್ಲಿ ನಾನಾ ಆಸೆ, ಅಕಾಂಕ್ಷೆಗಳಿಗೆ ಬಲಿಯಾಗಿ ತನ್ನತನವನ್ನು ಅರಿಯಲು ಸೋಲುತ್ತಾನೆ. ಅಸಂಗೋಹಂ ಕಮಲದ‌ ಎಲೆಗಳಂತೆ ಯಾವ ಆಕರ್ಷಣೆಗೂ ಪಕ್ಕಾಗದೆ ಬದುಕಿನ ನಿಜ ಗುರಿಯ ಸಾಕ್ಷಾತ್ಕಾರ ಪಡೆಯಬೇಕು ಎಂಬುದೆ ಈ ಕತೆಗಾರನ ಅಂಬೋಣ. ಈ ಕತಾಸಂಲನದಲ್ಲಿ ಒಂಬತ್ತು ಕತೆಗಳಿವೆ. ಪ್ರತಿಯೊಂದು ಕತೆ ಗಂಡು- ಹೆಣ್ಣಿನ ಸಂಬಂಧಗಳ ವಿವಿಧ ಆಯಾಮಗಳನ್ನು ಅಭಿವ್ಯಕ್ತಿಸಲಾಗಿವೆ. " ಅಸಂಗ" ಕತೆಯಲ್ಲಿ ಸಂಧ್ಯಾಕಾಲೇಜಿನ ಪ್ರಾಧ್ಯಾಪಕನೊಬ್ಬ ಮದುವೆಯಾದ ಕೆಲವೆ ದಿವಸಗಳಲ್ಲಿ ಹೆಂಡತಿ ದುರ್ಘಟನೆಯಲ್ಲಿ ಮೃತಪಡುತ್ತಾಳೆ. ಅವನು ದಿನಕಳೆದ ಹಾಗೆ ಓರ್ವ ವಿವಾಹಿತ ಹೆಣ್ಣಿನ ಸಂಪರ್ಕಕ್ಕೆ ಬರುತ್ತಾನೆ. ಅವಳು ಅವನ ವಿದ್ಯಾರ್ಥಿನಿಯೂ ಆಗಿರುತ್ತಾಳೆ. ಅವಳ ವೈವಾಹಿಕ ಬದುಕು ಸುಗಮವಾಗಿರುವುದಿಲ್ಲ. ಈ ಪ್ರಾಧ್ಯಾಪಕ ಅವಳ ಕುರಿತು ಮೋಹ ಬೆಳೆಸಿಕೊಳ್ಳುತ್ತಾನೆ. ಆದರೆ ಅವಳಿಗೆ ಇವನ ಬಗ್ಗೆ ಮೋಹ ಇರುವುದಿಲ್ಲ. ಅವನು ಮುಂದುವರಿದಂತೆ ಅವಳು ಅವನನ್ನು ತಪ್ಪು ತಿಳಿಯುತ್ತಾಳೆ.‌ಮತ್ತು ಒಂದು ದಿನ ಅವನ ಬದುಕಿನಿಂದ ನಿರ್ಗಮಿಸಿಬಿಡುತ್ತಾಳೆ.ಕುಸಿದು ಹೋದ ಪ್ರಾಧ್ಯಾಪಕನಿಗೆ ಅವನ ಗೆಳೆಯರು ಧೈರ್ಯ ತುಂಬುತ್ತಾರೆ. ಮತ್ತು ಅವನು ಸ್ವಾಮೀಜಿಯ ಅಸಂಗೋಹಂ ಪ್ರವಚನ ಕೇಳಿ ಕಮಲದ ಎಲೆಯಂತಾಗಬೇಕೆಂದು ಪ್ರವಚನ ಕೇಳುತ್ತಾನೆ. ಅಂತ್ಯ ಏನೆಂದಯ ಕತೆ ಹೇಳುವುದಿಲ್ಲ. ಅದು ಓದುಗರ ಊಹೆಗೆ ಬಿಟ್ಟದ್ದು‌ ಈ ಕತೆಯಎಂದೆನಿಸಿತು ಬೇಕಿದ್ದರೆ ಒಂದು ಕಾದಂಬರಿಯನ್ನಾಗಿಯೂ ಕೂಡ ಬೆಳೆಸಬಹುದು. ಎರಡನೆಯ ಕತೆ ಘಂಟಾನಾದ ಗುಜರಾತಿನ ಬೆಟ್ ದ್ವಾರಕ್ ಎಂಬಲ್ಲಿನ ಅರಬ್ಬಿ ಸಮುದ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಮುಳುಗಿ ಹೋಗಿದ್ದ ದೇವಾಲಯಗಳ ಘಂಟಾನಾದ ಕೇಳಿಸುತ್ತಿದೆಯಂತೆ. ಇದನ್ನು ಜಾಲತಾಣದಲ್ಲಿ ನೋಡಿದ ಅವಿನಾಶ್ ಎಂಬ ಮೂವತ್ತಾರರ ತರುಣ ಅದಕ್ಕಾಗಿ ಗುಜರಾತಿಗೆ ಹೊರಟು ನಿಲ್ಲುತ್ತಾನೆ. ಅಲ್ಲಿ ಜಪ್ಪಯ್ಯ ಎಂದರೂ ಘಂಟಾನಾದ ಕೇಳುವುದಿಲ್ಲ.ಆದರೆ ಅಲ್ಲಿ ಕುಂದನ್ ಎಂಬ ಸುಂದರ ಯುವತಿಯ ಸಂಪರ್ಕಕ್ಕೆ ಬಂದು ಅವರಿಬ್ಬರೂ ಒಂದಾಗುತ್ತಾರೆ. ಅಧ್ಯಾತ್ಮದಲ್ಲಿ ಭಕ್ತಿಪರವಶನಾದ ಅವಿನಾಶ್ ನಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ತನ್ನ ಬ್ರಹ್ಮಚರ್ಯ ನಷ್ಟಗೊಂಡಿತು ಎಂದು ಚಿಂತಿಸುತ್ತಾನೆ. ತನ್ನ ಈ ಹೀನ ಸ್ಥಿತಿಗೆ ಕುಂದನ್ ಕಾರಣಳೆ? ಇದು ಮಾಯೆಯಲ್ಲದೆ ಮತ್ತೇನು? ಎಂದು ಚಿಂತನೆ ನಡೆಸಿ ಗುರುಗಳಿಗೆ ಸಂಪೂರ್ಣ ಶರಣಾಗುತ್ತಾನೆ‌ ಹೀಗೆ ಭಕ್ತಿ ಮಾರ್ಗದಿಂದ ಇಂದ್ರಿಯ ಆಸೆಗಳನ್ನು ನಿಯಂತ್ರಿಸಿಕೊಳ್ಳುತ್ತಾನೆ. ನಾಡುನುಡಿಯ ವಿಧ್ವಂಸಕರು ಈಕತೆ ಲವ್ ಜೇಹಾದ್ ಇದರ ದುಷ್ಪರಿಣಾಮಗಳನ್ನು ಹೇಳುವ ಕತೆ. ಚಿಗುರೆಲೆಯೊಡನೆ ಸಂವಾದ ಕತೆಯು ತತ್ವಶಾಸ್ತ್ರ ಪರಿಣಿತರಾದ ವಯಸ್ದಾದ ಪ್ರಾಧ್ಯಾಪಕ ಮತ್ತು ಅವರ ಹದಿಹರೆಯದ ಶಿಷ್ಯೆಯ ನಡುವೆ ನಡೆದ ಅಧ್ಯಾತ್ಮಿಕ ಚರ್ಚೆ. ಇದೆ‌ ಈ ಕತೆಯಲ್ಲಿ ಜಿಡ್ಡುಕೃಷ್ಣ ಮೂರ್ತಿಯವರ ತತ್ವದ ಚಿಂತನ ಮಂಥನವಿದೆ. ಹುಡುಗಿ ಜಿಡ್ಡು ಕೃಷ್ಣಮೂರ್ತಿ ಅವರ ಆಶ್ರಮಕ್ಕೆ ಪ್ರಾಧ್ಯಾಪಕರೊಟ್ಟಿಗೆ ಹೋಗಿ ಪ್ರಬುದ್ಧಳಾಗಿ ಬದುಕನ್ನು ರೂಪಿಸಿಕೊಳ್ಳುವ ಕತೆ ಇದೆ. ಪಕ್ಷಾಂತರಿ ಕತೆಯಲ್ಲಿ ಎಡಪಂಥೀಯ ಬುದ್ಧಿಜೀವಿಗಳ ದ್ವಿಮುಖ ವ್ಯಕ್ತಿತ್ವವನ್ನು ವಿಡಂಬನೆಗೊಳಪಡಿಸಲಾಗಿದೆ. ಜೋಡಿಕಾಮನ ಬಿಲ್ಲು ಈ ಕತೆಯಲ್ಲಿ ಪ್ರೀತಿಸಿ ಮದುವೆಯಾಗಬೇಕೆಂದಿರುವ ಜೋಡಿಯಲ್ಲಿ ಯುವಕ ದುರ್ಘಟನೆಗೊಳಗಾಗಿ ಕೈಕಾಲು ಮುರಿದು ನಪುಂಸಕನಾಗಿಬಿಡುತ್ತಾನೆ. ಈ ದುರಂತವನ್ನು ಹೆಣ್ಣು ಹೇಗೆ ಸ್ವೀಕರಿಸುತ್ತಾಳೆ. ಇದುವೆ ಕತೆಯ ಸಾರ. ಅವಳು ತಾನು ಅವಿವಾಹಿತೆಯಾಗಿದ್ದುಕೊಂಡು, ಸ್ವತಂತ್ರವಾಗಿದ್ದುಕೊಂಡು, ಒಂಟಿತನವೆಂಬ ಅದ್ಭುತ ವಿದ್ಯಮಾನವನ್ನು ಹೇಗಿದೆಯೊ ಹಾಗೆ ವೀಕ್ಷಿಸುತ್ತ ಜೀವನ ಕಳೆಯಲೇ?" ಈ ಪ್ರಶ್ನೆಯೊಂದಿಗೆ ಕತೆ ಕೊನೆಗೊಳ್ಳುತ್ತದೆ. ಇದನ್ನು ಒಂದು ಕಾದಂಬರಿಯನ್ನಾಗಿ ಬೆಳೆಸಿಕೊಳ್ಖುವ ಎಲ್ಲ ಅವಕಾಶವಿದೆ. ಈ ಕತಾಸಂಕಲನದಲ್ಲಿ ಮುಂದಿನ ಕತೆ ಗೋಪುರದ ಗಂಟೆ. ಇದು ಒಂದು ಪರಿಣಾಮಕಾರಿ ಕತೆ. ಥಾಮಸ್ ಇವನು ಇಗರ್ಜಿಯ ಗಂಟೆ ಬಾರಿಸುವವ. ಅಪ್ಪ ಕುಡುಕ. ತಾಯಿ ಮಲ್ಲಿಗೆಯನ್ನು ಬೆಳೆದು ಮಾರಿ ಜೀವನ ಸಾಗಿಸುತ್ತಿದ್ದಳು. ಥಾಮಸ್ ಎಂಟು ವರ್ಷ ಪ್ರಾಯದವನಾಗುವಾಗ ಪೋಲಿಯೊ ರೋಗಬಡಿದು ಎರಡು ಕಂಕುಳಲ್ಲಿ ಊರುಗೋಲು ಇಲ್ಲದೆ ನಡೆಯಲಾರ. ಅವನು ಪರಿಸ್ಥಿತಿಯನ್ನು ಕಂಡು ಇಗರ್ಜಿಯ ಪಾಲನಾ ಸಮೀತಿಯ ಉಪಾಧ್ಯಕ್ಷರು ಅನುಕಂಪದ ನೆಲೆಯಲ್ಲಿ ಥಾಮಸ್ ನಿಗೆ ಇಗರ್ಜಿಯ ಮಿರ್ ನ್ಯಾಮ್ ನೌಕರಿಯನ್ನು ದಯಪಾಲಿಸಿತ್ತಾರೆ. ಇಗರ್ಜಿಯ ಗಂಟೆ ಬಾರಿಸುವ ಕೆಲಸ. ಅವನು ಯುವಕನಾಗುತ್ತಿದ್ದಂತೆ ಜ್ಯೂಲಿಯಾನಾ ಎಂಬ ಹುಡುಗಿ ಥಾಮಸ್ ನನ್ನು ಪ್ರೀತಿಸತೊಡಗುತ್ತಾರೆ. ಘಂಡಾಗೋಪುರದಲ್ಲಿ ಪರಸ್ಪರ ಆಲಿಂಗನ ಚುಂಬನ ಕೊಟ್ಟು ಕೊಳ್ಳುತ್ತಾರೆ. ಇದನ್ನು ಕಂಡ ಪಾದರಿ ಕ್ಲೆಮಂಟನಿಗೆ ಹೊಟ್ಟೆಕಿಚ್ಚು. ಹೊಂಚು ಹಾಕಿ ಪಾದರಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಾನೆ. ಮತ್ತು ಜ್ಯೂಲಿಯಾನಾ ಅಲ್ಲಿಂದ ಹೊರಬಿದ್ದಾಗ ಪಾದರಿಗೆ ಹೆದರಿಕೆ. ಜ್ಯೂಲಿಯಾನಾ ಪೋಲಿಸ್ ಕಂಪ್ಲೇಂಟ್ ಕೊಟ್ಟರೆ ತನ್ನ ಮುಖಭಂಗವಾಗುವುದೆಂದು ತಿಳಿದು. ಆ ಅತ್ಯಾಚಾರ ಆರೋಪವನ್ನು ಥಾಮಸ್ ನ ತಲೆಗೆ ಕಟ್ಡಿತ್ತಾನೆ.ಇದರಿಂದ ಘಾಸಿಗೊಂಡ ಥಾಮಸ್ ನೇಣುಹಾಕಿಕೊಂಡು ಸಾಯುತ್ತಾನೆ.‌ಜ್ಯೂಲಿಯಾನಾ ಕೂಡ ನೇಣು ಹಾಕಿಕೊಂಡು ಸಾಯುತ್ತಾಳೆ. ಮತ್ತೆ ಈ ಅತ್ಯಾಚಾರದ ಹಿಂದೆ ಪಾದ್ರಿಯ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಬಿಷಪ್ಪರು ಇದನ್ನು ಹೇಗಾದರೂ ಮಾಡಿ ಮುಚ್ಚಿಹಾಲು ನೋಡಿದರು. ಆದರೆ ಜನರ ಒತ್ತಡದ ಮೇತೆಗೆ ಪಾದರಿಯನ್ನು ಪೋಕಿಸರು ಅರೆಸ್ಟ್ ಮಾಡುವುದರೊಂದಿಗೆ ಕತೆ ಅಂತ್ಯಗೊಳ್ಳುತ್ತದೆ. ಕೊನೆಯ ಕತೆ ಮೃಗಜಲದ ಬೆಂಬತ್ತಿ ಈ ಕತೆಯಲ್ಲಿ ಜಿಡ್ಡು ಕೃಷ್ಣಮೂರ್ತಿ ಮತ್ತು ಓಶೋನ ಸೆಕ್ಸ್ ಕುರಿತ ವಿಚಾರಗಳ ಕುರಿತಾದ ಅವರ ಪ್ರೇಮದ‌ ಪ್ರೀತಿಯ ವ್ಯಾಖ್ಯಾನದ ಸಂಕಥನವಿದೆ. ಡ್ರಗ್ಸ್ ಮಾಫಿಯಾದಲ್ಲಿ ಕೈಯಾಡಿಸಿ ನಾರಾಯಣ ಪ್ರಭು ಎಂಬವನು ಒಂದು ವರ್ಷ ಜೈಲುಶಿಕ್ಷೆಗೆ ಒಳಗಾಗುತ್ತಾನೆ..ಅವನು ಜೈಲಿನಿಂದ‌ ಹೊರಬಂದ ಮೇಲೆ ಅಣ್ಣನ ಮನೆಗೆ ಹೋಗುತ್ತಾನೆ. ಹೆಂಡತಿ ಅಹಲ್ಯಾ ತನ್ನನ್ನು ಹೇಗೆ ಸ್ವೀಕರಿಸಿಯಾಳು ಎಂಬ ಬಗ್ಗೆ ಅವನಿಗೆ ಅನುಮಾನವಿರುತ್ತದೆ‌.‌ಜಿಡ್ಡು ಕೃಷ್ಣಮೂರ್ತಿಯವರ ಉಪನ್ಯಾಸ ಮತ್ತು ಓಶೋನ ಉಪನ್ಯಾಸ ನಾರಾಯಣ ಪ್ರಭು ಮೇಲೆ ತುಂಬ ಪ್ರಭಾವ ಬಿದ್ದಂತೆ ತೋರುತ್ತದೆ. ಅವನು ಹೆಂಡತಿಗೆ ಹೇಳುತ್ತಾನೆ:"'ಅಹಲ್ಯಾಬಾಯಿ. ನೀನು ಎಂದಾದರೂ ಒಂದು ತೊಟ್ಟು ಪ್ರೀತಿ ನೀಡಿದ್ದೀಯಾ? ನಿನ್ನ ಪ್ರಪಂಚವೆಂದರೆ ನೀನು ಮಗು ಮತ್ತು ಶಾಲೆಯ ಸಂಬಳ. ನೀನು ಎಂದೋ ನನ್ನನ್ನು ಮಾನಸಿಕವಾಗಿ ಡೈವೋರ್ಸ್ ಮಾಡಿದ್ದಿ‌. ಪ್ರೀತಿಯ ಅರ್ಥ ತಿಳಿಯದೆ ನೀನು ಪ್ರೀತಿಯನ್ನು ಹೇಗೆ ಕೊಡಬಲ್ಲೆ! " ಇಷ್ಟು ಹೇಳಿ "ನಾನು ಹಿಮಾಲಯಕ್ಕೆ ಹೋಗಿ ಕೊನೆಗಾಲದವರೆಗೂ ಅಲ್ಲೇ ಇರುತ್ತೇನೆ‌" ಎಂದು ಹೇಳಿ ಹೊರಟುಬಿಡುತ್ತಾನೆ. ತಮ್ಮ ೮೦ ರ ಹರೆಯದಲ್ಲಿ ಕತೆ ಹೇಳಬೇಕು ಜನರಿಗೆ ತಲುಪಿಸಬೇಕು ಎಂಬ ಹಂಬಲವುಳ್ಳ ಪ್ರಭುಗಳ ಕತೆಗಳಿಗೆ ವಿಮರ್ಶೆ ಬೇಕೆ? ಚೆನ್ನಾಗಿ ಬರೆದಿದ್ದಾರೆ. ಉದಯಕುಮಾರ ಹಬ್ಬು

No comments:

Post a Comment